ನಗರದ ಕಾಳಿಕಾಂಬ ಕಮಠೇಶ್ವರಸ್ವಾಮಿ ಸಮುದಾಯ ಭವನದಲ್ಲಿ ಭಾನುವಾರ ಮಯೂರಿ ನಾಟ್ಯಕಲಾ ಕೇಂದ್ರದಿಂದ ಪುರಂದರದಾಸರು, ತ್ಯಾಗರಾಜರು, ಕನಕದಾಸರು, ವಾಗ್ಗೇಯಕಾರರ ಆರಾಧನಾ ಮಹೋತ್ಸವ ಹಾಗೂ ನಟರಾಜೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
‘ಸುಮಾರು ಹತ್ತು ವರ್ಷಗಳಿಂದಲೂ ಪ್ರತಿ ವರ್ಷ ವಾಗ್ಗೇಯಕಾರರ ಆರಾಧನಾ ಮಹೋತ್ಸವ ಹಾಗೂ ನಟರಾಜೋತ್ಸವ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದೆ. ಸಂಗೀತ ಮತ್ತು ನೃತ್ಯವನ್ನು ಕಲಿತ ವಿದ್ಯಾರ್ಥಿಗಳಿಗೆ ವಿದ್ಯೆಯನ್ನು ಪ್ರದರ್ಶಿಸಲು ಇದೊಂದು ಅವಕಾಶವಾಗಿದೆ. ಕಲಾಸಕ್ತರು ಆಗಮಿಸಿ ಈ ಕಾರ್ಕ್ರಮದಲ್ಲಿ ಮಕ್ಕಳ ಕಲೆಯನ್ನು ನೋಡಿ ಪ್ರೋತ್ಸಾಹಿತ್ತಿದ್ದಾರೆ’ ಎಂದು ಮಯೂರಿ ನಾಟ್ಯಕಲಾ ಕೇಂದ್ರದ ಅಧ್ಯಕ್ಷೆ ವಿದುಷಿ ಎಸ್.ವಿ.ಭಾಗ್ಯಲಕ್ಷ್ಮಿ ಅಯ್ಯರ್ ತಿಳಿಸಿದರು.