Home News ವಿಶ್ವಕರ್ಮ ಸಮಾಜದ ವಧು ವರರ ಅನ್ವೇಷಣಾ ಕಾರ್ಯಕ್ರಮ

ವಿಶ್ವಕರ್ಮ ಸಮಾಜದ ವಧು ವರರ ಅನ್ವೇಷಣಾ ಕಾರ್ಯಕ್ರಮ

0

ವಿಶ್ವಕರ್ಮ ಸಮಾಜದ ವಧು ವರರ ಅನ್ವೇಷಣಾ ಕಾರ್ಯಕ್ರಮವನ್ನು ರಾಜ್ಯ ಮಟ್ಟದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ವಿಶ್ವಕರ್ಮ ಸಮಾಜದಲ್ಲಿರುವ 41 ಉಪಜಾತಿಗಳಲ್ಲಿರುವ ಪಂಚಕಸುಬುಗಳಿಗೆ ಸಂಬಂದಿಸಿದ್ದಾಗಿದೆ. ಬಡವರು, ಮಧ್ಯಮ ವರ್ಗದವರು, ಹಳ್ಳಿಗಳಲ್ಲಿರುವ ವಿಶ್ವಕರ್ಮ ಸಮಾಜದವರು ಈ ಅವಕಾಶವನ್ನು ಉಪಯೋಗಿಸಿಕೊಳ್ಳಬೇಕು. ಜುಲೈ 1 ರಿಂದ 3 ರವರೆಗೂ ಮೂರು ದಿನಗಳ ಕಾಲ ಬೆಂಗಳೂರಿನ ಅರಮನೆ ಮೈದಾನದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಸ್ಥಳದಲ್ಲೇ ಪುರೋಹಿತರು ಲಭ್ಯವಿರುತ್ತಾರೆ. ಅವರ ಸಹಾಯವನ್ನು ಪಡೆದು ಜಾತಕಗಳನ್ನು ಹೊಂದಿಸಿಕೊಳ್ಳಬಹುದು. ಕಾರ್ಯಕ್ರಮಕ್ಕೆ ಬರುವಾಗ ವಧೂ ವರರ ಫೋಟೋಗಳು, ಜಾತಕ ಮತ್ತು ಸ್ವವಿರವನ್ನು ತರಬೇಕು. ಸಂಬಂಧಪಟ್ಟ ತಾಲ್ಲೂಕು ಅಥವಾ ಜಿಲ್ಲಾಧ್ಯಕ್ಷರಿಂದ ಪಾಸುಗಳನ್ನು ಪಡೆದು ತರಬೇಕು. ವಧೂ ವರರೊಂದಿಗೆ ಇಬ್ಬರು ಪೋಷಕರಿಗೆ ಮಾತ್ರ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗಾಗಿ ಶಿಡ್ಲಘಟ್ಟ ತಾಲ್ಲೂಕು ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಮರನಾರಾಯಣಾಚಾರಿ 9379976591, 7676555580 ಸಂಪರ್ಕಿಸಲು ಕೋರಿದೆ.

error: Content is protected !!