ಶಾಶ್ವತ ನೀರಾವರಿ ಚಿಕ್ಕಬಳ್ಳಾಪುರದ ಚದಲಪುರದ ಬಳಿ ನಡೆಯುತ್ತಿರುವ ಅನಿರ್ಧಿಷ್ಠ ಧರಣಿಯಲ್ಲಿ ಪಾಲ್ಗೊಳ್ಳಲು ಮಣಮಾಚನಹಳ್ಳಿ ಗ್ರಾಮಸ್ಥರು ಪಾದಯಾತ್ರೆಯ ಮೂಲಕ ಭಾನುವಾರ ತೆರಳಿದರು.
ತಾಲ್ಲೂಕಿನ ಮಣಮಾಚನಹಳ್ಳಿ ಗ್ರಾಮದಿಂದ ಘೋಷಣೆಗಳನ್ನು ಕೂಗುತ್ತಾ ಪಾದಯಾತ್ರೆ ನಡೆಸಿದ ಗ್ರಾಮಸ್ಥರು ನಗರದ ಬಸ್ ನಿಲ್ದಾಣದ ಬಳಿ ಮಾನವ ಸರಪಣಿಯನ್ನು ನಿರ್ಮಿಸಿದರು.
ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದ ಮಣಮಾಚನಹಳ್ಳಿ ಗ್ರಾಮದ ನಾಗರಿಕರು, ಯುವಕರು, ಕನ್ನಡಪರ ಸಂಘಟನೆಗಳು, ಸ್ತ್ರೀಶಕ್ತಿಸಂಘಗಳು, ಕಾರ್ಮಿಕರು ಪರಮಶಿವಯ್ಯನವರ ಶಾಶ್ವತ ನೀರಿನ ಯೋಜನೆ ಜಾರಿಯಾಗುವವರೆಗೂ ನಡೆಯುವ ಅನಿರ್ಧಿಷ್ಠ ಧರಣಿಯಲ್ಲಿ ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸುತ್ತೇವೆ. ನೀರಿನ ಅಗತ್ಯತೆಯ ಅರಿವು ಆಢಳಿತ ನಡೆಸುವ ಜನಪ್ರತಿನಿಧಿಗಳಿಗೆ ಆಗುವವರೆಗೂ ಹೋರಾಟ ನಿಲ್ಲದು ಎಂದು ಹೇಳಿದರು. ನಂತರ ಮಣಮಾಚನಹಳ್ಳಿ ಗ್ರಾಮಸ್ಥರು ಅನಿರ್ಧಿಷ್ಠ ಧರಣಿ ನಡೆಯುತ್ತಿರುವ ಸ್ಥಳಕ್ಕೆ ಪಾದಯಾತ್ರೆಯ ಮೂಲಕ ತೆರಳಿದರು.