ಕೊರೋನ ಸೋಂಕು ಜಿಲ್ಲೆಯಲ್ಲಿ ಹರಡುತ್ತಿರುವ ಕಾರಣ ಜನರ ಆರೋಗ್ಯದ ಹಿತದೃಷ್ಟಿಯಿಂದ ಗೂಡು ಮಾರುಕಟ್ಟೆಯನ್ನು ಸ್ಥಗಿತಗೊಳಿಸಲಾಗುತ್ತಿದೆ ಎಂದು ಮಾರುಕಟ್ಟೆಯ ಉಪನಿರ್ದೇಶಕ ಸುಭಾಷ್ ಸಾತೇನಹಳ್ಳಿ ತಿಳಿಸಿದ್ದಾರೆ.
ಬೆಳೆದ ಗೂಡನ್ನು ಮಾರಾಟ ಮಾಡಲು ರೈತರಿಗೆ ತೊಂದರೆಯಾಗುತ್ತಿದೆ, ಹಾಗೂ ಬೆಲೆ ಸರಿಯಾಗಿ ಸಿಗುತ್ತಿಲ್ಲ ಎಂಬ ಕಾರಣಕ್ಕೆ ರೈತರು ಮಾರುಕಟ್ಟೆಯನ್ನು ತೆರೆಯಲು ಕೇಳಿದ್ದರು.
ಈ ಕುರಿತು ತಾಲ್ಲೂಕು ಆಡಳಿತ, ನಗರಸಭೆ, ರೀಲರುಗಳು ಹಾಗೂ ರೈತರ ಜೊತೆಗೆ ಸಮಾಲೋಚನೆ ಮಾಡಿದ ಮಾರುಕಟ್ಟೆ ಆಡಳಿತ, ರಾಜ್ಯಾದ್ಯಂತ ಬಹುತೇಕ ಗೂಡು ಮಾರುಕಟ್ಟೆಗಳು ಮುಚ್ಚಿದ್ದು, ಬಹಳಷ್ಟು ರೈತರು ಇಲ್ಲಿಗೆ ಮಾರಾಟ ಮಾಡಲು ಬರುವ ಸಂಭವವಿರುವದರಿಂದ ಸೋಂಕು ಹರಡುವ ಭೀತಿ ಹೆಚ್ಚಾಗಿರುತ್ತದೆ.
ಆದ್ದರಿಂದ ಜನರ ಆರೋಗ್ಯದ ಹಿತದೃಷ್ಟಿಯಿಂದ ಗೂಡು ಮಾರುಕಟ್ಟೆ ವ್ಯವಹಾರ ಸ್ಥಗಿತವನ್ನು ಮುಂದುವರೆಸಲು ನಿರ್ಧರಿಸಲಾಯಿತು ಎಂದು ಮಾರುಕಟ್ಟೆಯ ಉಪನಿರ್ದೇಶಕ ಸುಭಾಷ್ ಸಾತೇನಹಳ್ಳಿ ತಿಳಿಸಿದರು.