Home News ಶಿಡ್ಲಘಟ್ಟ ತಾಲ್ಲೂಕಿನ 'ಅಮೃತ'ಳಿಗೆ ಪ್ರಶಸ್ತಿ

ಶಿಡ್ಲಘಟ್ಟ ತಾಲ್ಲೂಕಿನ 'ಅಮೃತ'ಳಿಗೆ ಪ್ರಶಸ್ತಿ

0

ತಾಲ್ಲೂಕಿನ ತುಮ್ಮನಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಕೆ.ಎನ್. ಅಮೃತಳಿಗೆ ‘ವಿದ್ಯಾಸಾಗರ ಬಾಲ ಪುರಸ್ಕಾರ’ವನ್ನು ಶನಿವಾರ ಗದಗ ಜಿಲ್ಲೆಯ ಮುಂಡರ್ಗಿಯಲ್ಲಿ ನಡೆದ ಸಮಾರಂಭದಲ್ಲಿ ಖ್ಯಾತ ಸಾಹಿತಿಗಳಾದ ಆನಂದಪಾಟೀಲ, ರಾಜಶೇಖರ ಕುಕ್ಕುಂದ ಹಾಗೂ ಸುನಂದ ಪಿ. ಕಡಮೆ ಅವರು ಪ್ರಧಾನ ಮಾಡಿದರು.
ಕೆ.ಎನ್. ಅಮೃತ ಬರೆದ ಕಥೆ, ಕವನ, ನಾಟಕ, ಲೇಖನಗಳನ್ನು ಪರಿಗಣಿಸಿ ರಾಜ್ಯ ಮಟ್ಟದ ‘ವಿದ್ಯಾಸಾಗರ ಬಾಲ ಪುರಸ್ಕಾರ’ ಕ್ಕೆ ಆಯ್ಕೆ ಮಾಡಲಾಗಿತ್ತು. ರಾಜ್ಯದಾದ್ಯಂತ ಕ್ರಿಯಾಶೀಲ ಯುವ ಮನಸ್ಸುಗಳ ಬರಹಗಳಲ್ಲಿ ಕೆ.ಎನ್.ಅಮೃತ ಅವರ ಬರಹಗಳಿಗೆ ಮೊದಲ ಸ್ಥಾನ ನೀಡಿರುವುದಾಗಿ ತೀರ್ಪುಗಾರರಾಗಿದ್ದ ಡಾ. ಸುರೇಶ್ ನಾಗಲಮಡಿಕೆ ತಿಳಿಸಿದ್ದಾರೆ.

error: Content is protected !!