Home News ಶಿವರಾತ್ರಿ ಹಬ್ಬದ ಪ್ರಯುಕ್ತ ರಂಗೋಲಿ ಸ್ಪರ್ಧೆ

ಶಿವರಾತ್ರಿ ಹಬ್ಬದ ಪ್ರಯುಕ್ತ ರಂಗೋಲಿ ಸ್ಪರ್ಧೆ

0

ನಗರದದಲ್ಲಿ ಮಂಗಳವಾರ ರಾತ್ರಿ ಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀರಾಮ ಯುವಕರ ಸಂಘ ಮತ್ತು ಶ್ರೀಆಂಜನೇಯ ಯುವಕರ ಬಳಗದ ವತಿಯಿಂದ ಶ್ರೀರಾಮ ಹಾಗೂ ಮಾರಿಕಾಂಬ ದೇವಾಲಯದ ಮುಂಭಾಗ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ರಸ್ತೆಯಲ್ಲಿ 28 ಮಂದಿ ಮಹಿಳೆಯರು ರಂಗೋಲಿಯನ್ನು ಹಾಕಿದ್ದು ಇಡೀ ರಸ್ತೆಯನ್ನೇ ಹಬ್ಬದ ಪ್ರಯುಕ್ತ ಬಣ್ಣದಿಂದ ಸಿಂಗರಿಸಿದಂತೆ ಭಾಸವಾಗುತ್ತಿತ್ತು.
ರಂಗೋಲಿ ಸ್ಪರ್ಧೆಯ ತೀರ್ಪುಗಾರರಾಗಿ ಚಿಕ್ಕಬಳ್ಳಾಪುರದ ಉಷಾ ಶ್ರೀನಿವಾಸ್ ಮತ್ತು ನಿರ್ಮಲ ಆಗಮಿಸಿದ್ದರು. ಪ್ರಥಮ ಸ್ಥಾನ ಪಡೆದ ದಿವ್ಯ, ದ್ವಿತೀಯರಾದ ಪದ್ಮ ಮತ್ತು ತೃತೀಯರಾದ ಸುಕನ್ಯ ಅವರಿಗೆ ಕುಕ್ಕರ್ಗಳನ್ನು ಬಹುಮಾನವಾಗಿ ನೀಡಲಾಯಿತು. ಎಲ್ಲಾ ಸ್ಪರ್ಧಿಗಳಿಗೂ ಸಮಾಧಾನಕರ ಬಹುಮಾನ ವಿತರಿಸಲಾಯಿತು.
ಶ್ರೀರಾಮ ಯುವಕರ ಸಂಘದ ಅಧ್ಯಕ್ಷ ನಾಗರಾಜು, ನೃತ್ಯ ಕಲಾವಿದ ಸಿ.ಎನ್.ಮುನಿರಾಜು, ವಿ.ದೇವರಾಜು, ನರಸಿಂಹಮೂರ್ತಿ, ಶಿವಮೂರ್ತಿ, ದೀಪು ಹಾಜರಿದ್ದರು.