ತಾಲ್ಲೂಕಿನ ಆನೂರು ಗ್ರಾಮದ ವೀರಕೆಂಪಣ್ಣ ಅವರ ತೋಟದಲ್ಲಿ ಬುಧವಾರ ಸಿರಿಸಮೃದ್ಧ ರೈತಕೂಟ ಹಾಗೂ ಗರವಾರೆ ವಾಲ್ರೂಫ್ಸ್ ಕಂಪನಿ ವತಿಯಿಂದ ಶೇಡ್ನೆಟ್ ಹೌಸ್ ಹಾಗೂ ಕೃಷಿ ಹೊಂಡ ಪೇಪರ್ಗಳ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಅವರು ರೈತ ಕೂಟಗಳ ಒಕ್ಕೂಟದ ಅಧ್ಯಕ್ಷ ಎಚ್.ಜಿ.ಗೋಪಾಲಗೌಡ ಮಾತನಾಡಿ, ಪಾಲಿ ಹೌಸ್ ನಿರ್ಮಾಣಕ್ಕೆ ತಗುಲುವ ವೆಚ್ಚದಲ್ಲಿ ಶೇ.20 ರಷ್ಟು ವೆಚ್ಚಕ್ಕೆ ಶೇಡ್ನೆಟ್ ಹೌಸ್ ನಿರ್ಮಿಸಿಕೊಳ್ಳಬಹುದು. ಇದರಿಂದ ರೈತರು ಸಹಾಯಧನಕ್ಕಾಗಿ ಇಲಾಖೆಗಳನ್ನು ಸುತ್ತುವುದು ಹಾಗೂ ಬ್ಯಾಂಕ್ನಲ್ಲಿ ಸಾಲ ತೀರಿಸಲಾಗದೆ ಕಂಗಾಲಾಗುವುದು ತಪ್ಪುತ್ತದೆ ಎಂದು ತಿಳಿಸಿದರು.
ಪಾಲಿ ಹೌಸ್ ನಿಂದ ಆಗುವಷ್ಟೇ ಪ್ರಯೋಜನ, ಬೆಳೆ ಬೆಳೆಯುವುದು ಹಾಗೂ ಆದಾಯವನ್ನು ಕಡಿಮೆ ಬಂಡವಾಳದಲ್ಲಿ ಶೇಡ್ನೆಟ್ ಹೌಸ್ ನಿರ್ಮಾಣ ಮಾಡಿಕೊಳ್ಳುವ ಮೂಲಕ ಮಾಡಿಕೊಳ್ಳಬಹುದು. ಈಗಾಗಲೇ ಅದನ್ನು ನಿರ್ಮಿಸಿರವ ಪ್ರಗತಿಪರ ರೈತ ಆನೂರು ವೀರಕೆಂಪಣ್ಣ ಅವರ ತೋಟದಲ್ಲಿ ರೈತರು ನೋಡಿ ಅದರ ಉಪಯುಕ್ತತೆಗಳನ್ನು ಕಂಡುಕೊಳ್ಳಬಹುದು ಎಂದರು.
ಗರವಾರೆ ವಾಲ್ರೂಫ್ಸ್ ಕಂಪನಿಯ ಶ್ಯಾಮ್ಶೆಟ್ಟಿ ಮತ್ತು ಶ್ರೀಕಾಂತ್ ಮಾತನಾಡಿ, ಶೇಡ್ನೆಟ್ ನಿಂದಾಗುವ ಪ್ರಯೋಜನಗಳು, ಪಾಲಿ ಹೌಸ್ ಕೃಷಿ ಹೊಂಡಕ್ಕೆ ಹಾಕುವ ವಸ್ತುಗಳ ಗುಣಮಟ್ಟ ಮುಂತಾದ ವಿಷಯಗಳನ್ನು ಸವಿಸ್ತಾರವಾಗಿ ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಿದರು.
ಸಿರಿಸಮೃದ್ಧ ರೈತಕೂಟದ ಅಧ್ಯಕ್ಷ ಬೋದಗೂರು ವೆಂಕಟಸ್ವಾಮಿರೆಡ್ಡಿ, ಕೃಷಿ ಪಂಡಿತ ಆನೂರು ವೀರಕೆಂಪಣ್ಣ, ರೈತರಾದ ರಾಮಮೂರ್ತಿ, ಚಂದ್ರಪ್ಪ, ನಾಗೇಶ, ಸತೀಶ, ವೆಂಕಟೇಶಪ್ಪ, ಪ್ರಕಾಶ್, ನಾಗೇಂದ್ರ, ಶ್ರೀನಿವಾಸ್, ಬೂದಾಳ ರಾಮಾಂಜಿ, ದಿವಾಕರ್, ಗರ್ವಾರೆ ವಾಲ್ರೂಫ್ಸ್ ಕಂಪನಿಯ ಅತಿನ್ ಗೋಯಲ್, ವಿಕಾಸ್ಕುಮಾರ್, ಶ್ರೀಕಾಂತ್ ವೇಮುಲ, ಅಯೂಬ್ ಹಾಜರಿದ್ದರು.