Home News ಶ್ರೀ ಸೀತಾರಾಮ ದೇವಾಲಯದಲ್ಲಿ ಶ್ರೀರಾಮನಾಮ ಜಪಯಜ್ಞ

ಶ್ರೀ ಸೀತಾರಾಮ ದೇವಾಲಯದಲ್ಲಿ ಶ್ರೀರಾಮನಾಮ ಜಪಯಜ್ಞ

0

ತಾಲ್ಲೂಕಿನ ಎಸ್.ದೇವಗಾನಹಳ್ಳಿ ಗ್ರಾಮ ಪಂಚಾಯಿತಿಯ ಎಸ್.ಗುಂಡ್ಲಹಳ್ಳಿ ಗ್ರಾಮದ ಶ್ರೀ ಸೀತಾರಾಮ ದೇವಾಲಯದಲ್ಲಿ ಶ್ರೀರಾಮನಾಮ ಜಪಯಜ್ಞವನ್ನು ಹಮ್ಮಿಕೊಂಡಿದ್ದು ಲೋಕ ಕಲ್ಯಾಣಾರ್ಥವಾಗಿ ಕಳೆದ ಏಳು ದಿನಗಳಿಂದಲೂ ನಿರಂತರವಾಗಿ ಶ್ರೀರಾಮನಾಮ (ರಾಮಕೋಟಿ) ಜಪ ಮಾಡಲಾಯಿತು.
ಲೋಕಲ್ಯಾಣಾರ್ಥ ಗ್ರಾಮಸ್ಥರು ಶ್ರೀರಾಮನಾಪ ಜಪ ಯಜ್ಞವನ್ನು ಹಮ್ಮಿಕೊಂಡಿದ್ದು ಕಳೆದ ವಾರದಿಂದಲೂ ನಿರಂತರವಾಗಿ ರಾತ್ರಿ ಹಗಲೆನ್ನದೆ ಶ್ರೀರಾಮನ ಭಜನೆ, ಕೀರ್ತನೆ, ನಾಮ ಸ್ಮರಣೆ ನಡೆಸಿ ಶನಿವಾರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಉತ್ಸವ ನಡೆಸಲಾಯಿತು.
ಈ ಸಂಪ್ರದಾಯವನ್ನು ಹತ್ತಾರು ವರ್ಷಗಳಿಂದಲೂ ನಡೆಸಿಕೊಂಡು ಬಂದಿರುವ ಗ್ರಾಮಸ್ಥರು ಎಲ್ಲರೂ ಒಗ್ಗಟ್ಟಾಗಿ ಸೇರಿ ದೇವಾಲಯದ ಆವರಣದಲ್ಲಿ ಶ್ರೀರಾಮನಾಮ ಜಪ ಯಜ್ಞವನ್ನು ನಡೆಸಿದರು.
ದೇವರಿಗೆ ವಿಶೇಷ ಹೂವಿನ ಅಲಂಕಾರ ಮಾಡಿ ಪೂಜೆ ನೆರವೇರಿಸಿ ಮಹಾ ಮಂಗಳಾರತಿ ಮಾಡಿ ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು.
ಪುರದ ಗಡ್ಡೆ ಕೃಷ್ಣಪ್ಪ, ನಾರಾಯಣಪ್ಪ, ಈಶ್ವರಾಚಾರಿ ಇನ್ನಿತರೆ ಅನೇಕರು ಶ್ರೀರಾಮನ ವಚನಗಳು, ಕೀರ್ತನೆ, ಭಜನೆ ಹಾಗೂ ಉಪನ್ಯಾಸದ ಮೂಲಕ ಶ್ರೀರಾಮನಾಮದ ಜಪದ ಶಕ್ತಿ ಕುರಿತು ವಿವರಿಸಿದರು.
ಗ್ರಾಮದ ಎಲ್ಲ ಮುಖಂಡರು ಹಾಗೂ ಸುತ್ತ ಮುತ್ತಲ ಗ್ರಾಮಗಳ ಭಕ್ತರು ಅಖಂಡ ಭಜನೆ ಶ್ರೀರಾಮ ನಾಮ ಜಪಯಜ್ಞ ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ವಾಮಿಯ ಕೃಪೆಗೆ ಪಾತ್ರರಾದರು.