Home News ಸಂಕ್ರಾಂತಿ ಕವಿ ಗೋಷ್ಠಿ ಹಾಗೂ ಕುವೆಂಪು ರವರ ಜನ್ಮ ದಿನಾಚರಣೆ

ಸಂಕ್ರಾಂತಿ ಕವಿ ಗೋಷ್ಠಿ ಹಾಗೂ ಕುವೆಂಪು ರವರ ಜನ್ಮ ದಿನಾಚರಣೆ

0

ತಾಲ್ಲೂಕಿನ ಆನೂರು ಗ್ರಾಮದಲ್ಲಿ ಸಂಕ್ರಾಂತಿ ಅಂಗವಾಗಿ ತಾಲ್ಲೂಕು ವಚನ ಸಾಹಿತ್ಯ ಪರಿಷತ್ತಿನ ವತಿಯಿಂದ ಶ್ರೀನಿವಾಸ್ ಅವರ ಮನೆಯಲ್ಲಿ ಸೋಮವಾರ ಸಂಜೆ ಏರ್ಪಡಿಸಲಾಗಿದ್ದ “ಸಂಕ್ರಾಂತಿ ಕವಿ ಗೋಷ್ಠಿ ಹಾಗೂ ಕುವೆಂಪು ರವರ ಜನ್ಮ ದಿನಾಚರಣೆ”ಯ ಕಾರ್ಯಕ್ರಮ ಉದ್ಘಾಟಿಸಿ ವೈದ್ಯ ಡಾ.ರಮೇಶ್ ಕೋಲಾರ ಮಾತನಾಡಿದರು.
ಪರಂಪರಾನುಗತವಾಗಿ ನಾವುಗಳು ಆಚರಿಸುವ ಹಬ್ಬ ಹರಿದಿನಗಳಲ್ಲಿ ಜಾನಪದ ಸಂಸ್ಕೃತಿಯು ಹಾಸುಹೊಕ್ಕಾಗಿದೆ. ಕುವೆಂಪುರವರು ಮಾತೃಭಾಷೆಗೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕೆಂದು ಒತ್ತಾಯಿಸುತ್ತಿದ್ದರು ಎಂದರು.
ಶಿಕ್ಷಕ ಕೆಂಪಣ್ಣ ಕುವೆಂಪು ವರ ಸಾಹಿತ್ಯ ಮತ್ತು ಜೀವನದ ಬಗ್ಗೆ ವಿವರಿಸಿದರು. ಶಿಕ್ಷಕ ವಿ.ಕೃಷ್ಣ ಸಂಕ್ರಾಂತಿ ಹಬ್ಬದ ಬಗ್ಗೆ ಮಾತನಾಡಿದರು.
ಕವಿ ಗೋಷ್ಠಿಯಲ್ಲಿ ಶ್ಯಾಮಸುಂದರ್, ರೂಪಸಿ ರಮೇಶ್, ಟಿ ಟಿ ನರಸಿಂಹಪ್ಪ, ವೇಣು ಸೇರಿದಂತೆ ವಿವಿಧ ಕವಿಗಳು ತಮ್ಮ ಸ್ವರಚಿತ ಕವನಗಳನ್ನು ವಾಚಿಸಿದರು. ಆನೂರು ಶ್ರೀನಿವಾಸ್ ಮತ್ತು ರೂಪ ದಂಪತಿಯನ್ನು ಸನ್ಮಾನಿಸಲಾಯಿತು.
ವಚನ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ನಾರಾಯಣ ಸ್ವಾಮಿ, ಸುಂದರಾಚಾರಿ, ಬೈರೇಗೌಡ, ರವಿ ಪ್ರಕಾಶ್, ಗೋಪಾಲ ಗೌಡ, ಮಂಜುನಾಥ್, ವೆಂಕಟಸ್ವಾಮಿರೆಡ್ಡಿ, ಸುರೇಶ್, ಗ್ರಾಮ ಪಂಚಾಯತಿ ಸದಸ್ಯೆ ಉಮಾ, ಸರಸ್ವತಮ್ಮ ಹಾಜರಿದ್ದರು.

error: Content is protected !!