Home News ಸಂಚಾರಕ್ಕೆ ಅಡ್ಡಿಯಾದ ವಿದ್ಯುತ್ ಕಂಬ

ಸಂಚಾರಕ್ಕೆ ಅಡ್ಡಿಯಾದ ವಿದ್ಯುತ್ ಕಂಬ

0

ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗಿರುವ ವಿದ್ಯುತ್ ಕಂಬವನ್ನು ತೆರವುಗೊಳಿಸುವಂತೆ ರೈತರು ಒತ್ತಾಯಿಸಿದ್ದಾರೆ.
ತಾಲ್ಲೂಕಿನ ಚೌಡಸಂದ್ರ ಗ್ರಾಮಕ್ಕೆ ಮೇಲೂರಿನಿಂದ ಸಂಚಾರ ಮಾಡುವಂತಹ ಜಲ್ಲಿ ರಸ್ತೆಯ ಸನಿಹದಲ್ಲೆ ವಿದ್ಯುತ್ ಕಂಬವಿದ್ದು, ರೈತರಿಗೆ ತೊಂದರೆಯಾಗಿದೆ. ಈ ಭಾಗದಲ್ಲಿ ರೇಷ್ಮೆ ಹುಳುಗಳಿಗೆ ಹಿಪ್ಪುನೇರಳೆ ಸೊಪ್ಪನ್ನು ತೆಗೆದುಕೊಂಡು ಹೋಗುತ್ತಾರೆ, ದನಕರುಗಳಿಗೆ ಮೇವುಗಳನ್ನು ತರಬೇಕಾದರೂ ಜನರು ಇದೇ ರಸ್ತೆಯಲ್ಲೆ ಸಂಚಾರ ಮಾಡುತ್ತಾರೆ, ಹೊಲಗಳಲ್ಲಿ ಕಟಾವು ಮಾಡಿರುವ ಬೆಳೆಗಳನ್ನು ಸಾಗಾಣಿಕೆ ಮಾಡಬೇಕಾದರೆ ವಿದ್ಯುತ್ ಕಂಬ ಅಡ್ಡಿಯಾಗಿದ್ದು, ಟ್ರ್ಯಾಕ್ಟರ್ಗಳು ಸೇರಿದಂತೆ ಬಾರೀ ವಾಹನಗಳು ಈ ಭಾಗದಲ್ಲಿ ಸಂಚಾರ ಮಾಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸಂಬಂಧಪಟ್ಟ ಬೆಸ್ಕಾಂ ಇಲಾಖಾಧಿಕಾರಿಗಳು ಈ ಕಡೆಗೆ ಗಮನಹರಿಸಿ ಕಂಬವನ್ನು ತೆರವುಗೊಳಿಸಿ ಬೇರೆಡೆಗೆ ಸ್ಥಳಾಂತರ ಮಾಡಬೇಕು ಎಂದು ಸ್ಥಳೀಯ ತೋಟಗಳ ರೈತರು ಒತ್ತಾಯ ಮಾಡಿದ್ದಾರೆ.