Home News ಸರ್ಕಾರದ ವತಿಯಿಂದ ಟಿಪ್ಪು ಸುಲ್ತಾನ್ ಜಯಂತಿಯನ್ನು ಆಚರಣೆ ಮಾಡಬೇಕು

ಸರ್ಕಾರದ ವತಿಯಿಂದ ಟಿಪ್ಪು ಸುಲ್ತಾನ್ ಜಯಂತಿಯನ್ನು ಆಚರಣೆ ಮಾಡಬೇಕು

0

ಮರಾಠರು ಧಾಳಿ ಮಾಡಿದ್ದ ಶೃಂಗೇರಿ ದೇವಸ್ಥಾನಕ್ಕೆ ರಕ್ಷಣೆ ನೀಡಿದ್ದ ಟಿಪ್ಪು ಸುಲ್ತಾನ್ ಸಾಮರಸ್ಯವನ್ನು ಪ್ರತಿಪಾದಿಸುವ ವ್ಯಕ್ತಿತ್ವ ಎಂದು ಕೈವಾರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮಹಮ್ಮದ್ ಖಾಸಿಂ ತಿಳಿಸಿದರು.
ಪಟ್ಟಣದ ದಿಬ್ಬೂರಹಳ್ಳಿ ರಸ್ತೆಯ ದರ್ಗಾ ಬಳಿ ಟಿಪ್ಪು ಅಭಿಮಾನಿ ಬಳಗದಿಂದ ಗುರುವಾರ ನಡೆದ ಟಿಪ್ಪು ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮೊಟ್ಟಮೊದಲು ಯುದ್ಧದಲ್ಲಿ ಕ್ಷಿಪಣಿಯ ಪ್ರಯೋಗಿಸಿದ್ದ ಕಾರಣಕ್ಕೆ ಅಮೆರಿಕಾದ ಬಾಹ್ಯಾಕಾಶ ಸಂಸ್ಥೆಯವರು ಟಿಪ್ಪುವಿನ ಭಾವಚಿತ್ರವನ್ನು ಪ್ರದರ್ಶಿಸಿದ್ದಾರೆ. ದೇಶಕ್ಕಾಗಿ ಹೋರಾಡಿ ಮಡಿದ ಟಿಪ್ಪು ಸುಲ್ತಾನ್ ಭಾವಚಿತ್ರವೇ ನಮ್ಮಲ್ಲಿಲ್ಲದಿರುವುದು ದೊಡ್ಡ ದುರಂತ. ಸರ್ಕಾರದ ವತಿಯಿಂದ ಟಿಪ್ಪು ಸುಲ್ತಾನ್ ಜಯಂತಿಯನ್ನು ಆಚರಣೆ ಮಾಡಬೇಕು ಎಂದು ಒತ್ತಾಯಿಸಿದರು.
ಭಗವಂತನ ರಾಜ್ಯದ ಸೇವಕನೆಂದು ತನ್ನನ್ನು ಕರೆದುಕೊಂಡಿದ್ದ ಈ ಧೀಮಂತ ನಾಯಕನನ್ನು ದೇಶದ ದುರಂತ ನಾಯಕನನ್ನಾಗಿ ಪ್ರತಿಬಿಂಬಿಸಿರುವುದು ದುರದೃಷ್ಟಕರ ಎಂದು ಹೇಳಿದರು.
ಟಿಪ್ಪು ಅಭಿಮಾನಿ ಬಳಗದಿಂದ ಟಿಪ್ಪು ವೇಷಧಾರಿ ಹಾಗೂ ಭಾವಚಿತ್ರದೊಂದಿಗೆ ಪಟ್ಟಣದಲ್ಲಿ ಮೆರವಣಿಗೆಯನ್ನು ನಡೆಸಲಾಯಿತು.
ಪುರಸಭಾ ಸದಸ್ಯ ಶಫೀವುಲ್ಲಾ, ಸಮತಾ ಸೈನಿಕ ದಳದ ಶ್ರೀರಾಮ್, ಟಿಪ್ಪು ಅಭಿಮಾನಿ ಸಂಘದ ಅಬ್ದುಲ್ ರಶೀದ್, ಡಾ.ಸತ್ಯನಾರಾಯಣ್, ಟಿಪ್ಪು ಸೆಕ್ಯುಲರ್ ಸೇನೆ ರಾಜ್ಯ್ಯ ಸಂಚಾಲಕ ಡಾ.ಶಬ್ಬೀರ್, ಮೊಯುದ್ದೀನ್ ಪಾಷ, ರಸೂಲ್, ಮೌಲಾ, ಜೈ ಹಿಂದ್ ಆಟೋ ಚಾಲಕರ ಅಪ್ಪು, ಗಿರಿಧರ್, ರಘು, ಯೂಸುಫ್, ಮಹಬೂಬ್ ಖಾನ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.