ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರು ಸಮೀಪದ ಶ್ರೀ ಸಾಯಿನಾಥ ಜ್ಞಾನಮಂದಿರದಲ್ಲಿ ಭಾನುವಾರ ವಿಶೇಷ ಸಾಯಿ ಸ್ಮರಣಾ ಭಜನಾ ಕಾರ್ಯಕ್ರಮವನ್ನು ಬೆಂಗಳೂರಿನ ಸಾಯಿ ಸ್ಮರಣಾ ವೃಂದದ ವಂದನಾ ಕಾಮತ್ ನೇತೃತ್ವದ ತಂಡ ನಡೆಸಿಕೊಟ್ಟರು. ಕಲಾವಿದರಾದ ನಾಗರಾಜ್, ಕಾರ್ತಿಕ್, ಜಗನ್ ಅವರ ವಾದ್ಯಗೋಷ್ಠಿ ಜೊತೆಯಾಗಿತ್ತು. ಸಾಯಿನಾಥ ಜ್ಞಾನ ಮಂದಿರದ ಅಧ್ಯಕ್ಷ ಎಂ.ನಾರಾಯಣಸ್ವಾಮಿ, ಅಮರ ಸಾಯಿ, ಬಾಬು, ಮಂಜುನಾಥ, ದೇವರಾಜ್ ಹಾಜರಿದ್ದರು.