Home News ಸ್ವಾತಂತ್ರ್ಯವು ಶೋಷಕರ ವಿರೋಧಿ

ಸ್ವಾತಂತ್ರ್ಯವು ಶೋಷಕರ ವಿರೋಧಿ

0

ಸ್ವಾತಂತ್ರ್ಯ ಎನ್ನುವುದು ಶೋಷಿತ ವ್ಯವಸ್ಥೆಯನ್ನು ಕಿತ್ತೊಗೆದು ಶ್ರಮಿಕರು ವಿಮೋಚನೆ ಪಡೆಯುವುದಾಗಿದೆ. ಸ್ವಾತಂತ್ರ್ಯವು ಎಂದಿಗೂ ಒಡೆಯರ, ಪ್ರಭುಗಳ, ಶೋಷಕರ ವಿರೋಧಿ ಎಂಬುದು ಭಗತ್ ಸಿಂಗ್ ಅವರ ಆಲೋಚನೆಯಾಗಿತ್ತು ಎಂದು ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಸಿ.ನಂದೀಶ್ ತಿಳಿಸಿದರು.
ತಾಲ್ಲೂಕಿನ ಎಲ್.ಮುತ್ತಕದಹಳ್ಳಿಯಲ್ಲಿ ಬಿಜೆಪಿ ಯುವ ಮೋರ್ಚಾ ತಾಲ್ಲೂಕು ಅಧ್ಯಕ್ಷ ಬೈರಾರೆಡ್ಡಿ ಮನೆಯ ಆವರಣದಲ್ಲಿ ಈಚೆಗೆ ಆಯೋಜಿಸಿದ್ದ ಭಗತ್ ಸಿಂಗ್ ೧೦೯ನೇ ಜಯಂತಿ ಕಾರ್ಯಕ್ರಮದಲ್ಲಿ ಭಗತ್ ಸಿಂಗ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಭಗತ್ ಸಿಂಗ್ನ ಹೆಸರೇ ರೋಮಾಂಚನ ಉಂಟುಮಾಡುವಂಥದ್ದು. ನಮ್ಮ ದೇಶದ ಇತಿಹಾಸದಲ್ಲಿ ಇವರ ಹೆಸರು ಚಿರಸ್ಥಾಯಿಯಾಗಿದೆ. ಭಾರತ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿ ಹಾಗೂ ಯುವಕರಲ್ಲಿ ಕ್ರಾಂತಿಯ ಕಿಡಿ ಹಚ್ಚಿದ ಭಗತ್ ಸಿಂಗ್ ಇಂದಿಗೂ ಯುವಕರಿಗೆ ಪ್ರೇರಣೆ ಎಂದು ಹೇಳಿದರು.
ಬಿಜೆಪಿ ಯುವ ಮೋರ್ಚಾ ತಾಲ್ಲೂಕು ಅಧ್ಯಕ್ಷ ಬೈರಾರೆಡ್ಡಿ ಮಾತನಾಡಿ, ಜಾತಿ ರಹಿತ ಸಮ ಸಮಾಜವನ್ನು ಭಗತ್ಸಿಂಗ್ ಪ್ರತಿಪಾದಿಸಿದ್ದರು.ಭಗತ್ಸಿಂಗ್ನನ್ನು ಬ್ರಿಟಿಷ್ ಸರ್ಕಾರ ಗಲ್ಲಿಗೇರಿಸಿ ದಶಗಳು ಕಳೆದಿದ್ದರೂ ಅವರ ತತ್ವಾದರ್ಶ ಇಂದಿಗೂ ಪ್ರಸ್ತುತ ಎಂದು ಹೇಳಿದರು.
ಈ ಸಂದರ್ಭದಲ್ಲಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಭರತ್ ರೆಡ್ಡಿ, ಕಿರಣ್, ಮುನಿರಾಜು, ದಾಮೋದರ್, ಅಶ್ವಕ್ ಅಹ್ಮಮದ್, ನರೇಶ್, ಮಂಜುನಾಥ್, ಗಂಗಾಧರ್, ವೇಣು ಮತ್ತಿತರರು ಹಾಜರಿದ್ದರು.

error: Content is protected !!