Home News ಹಾಳು ಬಾವಿಯಲ್ಲಿ ಬಿದ್ದಿದ್ದ ಕಾಡುಮೊಲದ ರಕ್ಷಣೆ

ಹಾಳು ಬಾವಿಯಲ್ಲಿ ಬಿದ್ದಿದ್ದ ಕಾಡುಮೊಲದ ರಕ್ಷಣೆ

0

ತಾಲ್ಲೂಕಿನ ಕೊತ್ತನೂರು ಗ್ರಾಮದಲ್ಲಿ ಚನ್ನರಾಯಪ್ಪ ಅವರ ತೋಟದಲ್ಲಿರುವ ಹಾಳು ಬಾವಿಯಲ್ಲಿ ಬಿದ್ದಿದ್ದ ಕಾಡುಮೊಲವನ್ನು ಸ್ನೇಕ್ ನಾಗರಾಜ್ ಶನಿವಾರ ರಕ್ಷಿಸಿದ್ದಾರೆ.
ನಾಯಿಗಳು ಅಟ್ಟಿಸಿಕೊಂಡು ಬಂದಾಗ ಕತ್ತಲ್ಲಿ ದಿಕ್ಕುತಪ್ಪಿ ಕಾಡುಮೊಲ ಸುಮಾರು 40 ರಿಂದ 50 ಅಡಿ ಆಳವಿರುವ ಹಾಳುಬಾವಿಯಲ್ಲಿ ಶುಕ್ರವಾರ ರಾತ್ರಿ ಬಿದ್ದಿದೆ. ನಾಯಿಗಳು ಬಾವಿಯ ಬಳಿ ಬೊಗಳುವುದನ್ನು ಕಂಡು ಅದೇ ಗ್ರಾಮದ ಕೇಶವ ಹೋಗಿ ನೋಡಿದ್ದಾರೆ. ಕತ್ತಲಲ್ಲಿ ಯಾವ ಪ್ರಾಣಿ ಎಂದು ತಿಳಿಯದೆ ಸ್ನೇಕ್‌ ನಾಗರಾಜ್‌ ಅವರಿಗೆ ತಿಳಿಸಿದ್ದಾರೆ.
ಬೆಳಿಗ್ಗೆ ಬಂದು ನೋಡಿದ ನಾಗರಾಜ್‌ ಬಾವಿಯಲ್ಲಿ ಬಿದ್ದಿರುವ ಕಾಡುಮೊಲವನ್ನು ಕಂಡು, ಹಗ್ಗ ಮತ್ತು ಚೀಲದೊಂದಿಗೆ ಬಾವಿಯಲ್ಲಿ ಇಳಿದು ಚಾಕಚಕ್ಯತೆಯಿಂದ ಮೊಲವನ್ನು ಚೀಲದಲ್ಲಿ ಹಾಕಿಕೊಂಡು ಮೇಲೆ ತಂದು ರಕ್ಷಿಸಿದ್ದಾರೆ.
‘ಕಾಡುಮೊಲ ಬಲು ಚುರುಕು ಪ್ರಾಣಿ. ಹಾಳು ಬಾವಿಯಲ್ಲಿ ಬಿದ್ದಿರುವ ಅದು ಆಹಾರವಿಲ್ಲದೆ ಸಾಯುತ್ತಿತ್ತು. ಅಥವಾ ಯಾರಾದರೂ ಕೊಂದು ತಿನ್ನುತ್ತಿದ್ದರು. ಅದಕ್ಕಾಗಿ ಬಾವಿಯಲ್ಲಿ ಇಳಿದು ಕಾಡುಮೊಲವನ್ನು ರಕ್ಷಿಸಿದೆ. ಅದರ ಕಿವಿಯಲ್ಲಿ ಪಿಡುಗ ಎಂದು ಕರೆಯುವ ರಕ್ತ ಹೀರುವ ಹುಳುಗಳು ಅದರ ರಕ್ತ ಹೀರುತ್ತಿದ್ದವು. ಆ ಹುಳುಗಳನ್ನು ಕಿತ್ತು ಬಿಸಾಡಿ ಅದನ್ನು ಸ್ವತಂತ್ರವಾಗಿ ಹೋಗಲು ಬಿಟ್ಟೆ’ ಎಂದು ಮೊಲವನ್ನು ರಕ್ಷಿಸಿದ ಸ್ನೇಕ್‌ ನಾಗರಾಜ್‌ ತಿಳಿಸಿದರು.

error: Content is protected !!