Home News ಹುತಾತ್ಮ ಯೋಧ ಗಂಗಾಧರ್‌ ಪುಣ್ಯಸ್ಮರಣೆ

ಹುತಾತ್ಮ ಯೋಧ ಗಂಗಾಧರ್‌ ಪುಣ್ಯಸ್ಮರಣೆ

0

ತಾಲ್ಲೂಕಿನ ವರದನಾಯಕನಹಳ್ಳಿ ಗೇಟ್‌ನಲ್ಲಿ ಶನಿವಾರ ಮಧ್ಯಾಹ್ನ ವರದನಾಯಕನಹಳ್ಳಿ ಗ್ರಾಮಸ್ಥರಿಂದ ಹುತಾತ್ಮ ಯೋಧ ಗಂಗಾಧರ್‌ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಹುತಾತ್ಮ ಯೋಧ ಗಂಗಾಧರ್‌ ಅವರ ತಮ್ಮ ಯೋಧ ರವಿಕುಮಾರ್‌ ಹಾಗೂ ಗಂಗಾಧರ್‌ ಮಗ ಪವನ್‌ಗೌಡ ರನ್ನು ಗೌರವಿಸಲಾಯಿತು.
ಸೈನಿಕರ ನೆನಪಿಗಾಗಿ ಆಯೋಜಿಸಿದ್ದ ಈ ಕಾರ್ಯಕ್ರಮದ ನಂತರ ಗ್ರಾಮಸ್ಥರಿಗೆ ಯೋಧರ ನೆನಪಿನಲ್ಲಿ ಅನ್ನಸಂತರ್ಪಣೆಯನ್ನು ನಡೆಸಲಾಯಿತು.
ಗ್ರಾಮ ಪಂಚಾಯ್ತಿ ಸದಸ್ಯರಾದ ವಿ.ಎನ್‌.ಜಯರಾಮ್‌, ವಿ.ಜಿ.ಕೃಷ್ಣಮೂರ್ತಿ, ಶಿಕ್ಷಕ ವಿ.ಎನ್‌.ಗಜೇಂದ್ರ, ಗ್ರಾಮಸ್ಥರಾದ ವಿ.ದ್ಯಾವಪ್ಪ, ವಿ.ಎನ್‌.ವೇಣು, ನಾಗರಾಜ್‌, ಆಂಜನೇಯರೆಡ್ಡಿ, ವರದರಾಜ್‌, ವಿ.ಬಿ.ನಾರಾಯಣಸ್ವಾಮಿ, ವಿ.ಆರ್‌.ಶ್ರೀನಿವಾಸ್‌, ಎಂ.ಹನುಮಂತಯ್ಯ, ಟಿ.ವಿ.ಚಂದ್ರಶೇಖರ್‌, ಎಂ.ವೆಂಕಟರೆಡ್ಡಿ, ದೇವರಾಜ್‌ ಹಾಜರಿದ್ದರು.

error: Content is protected !!