Home News ಹೆಸರಿನ ಗೊಂದಲ ಮೂಡಿಸಲು ನಾಮಪತ್ರ ಸಲ್ಲಿಕೆ

ಹೆಸರಿನ ಗೊಂದಲ ಮೂಡಿಸಲು ನಾಮಪತ್ರ ಸಲ್ಲಿಕೆ

0

ಒಂದೇ ಹೆಸರಿನ ಡಮ್ಮಿ ಅಭ್ಯರ್ಥಿಗಳನ್ನು ನಿಲ್ಲಿಸಿ ಮತದಾರರಲ್ಲಿ ಗೊಂದಲ ಮೂಡಿಸಿ ಅದರ ಲಾಭವನ್ನು ಪಡೆಯುವ ಪ್ರಯತ್ನಗಳು ಹಲವೆಡೆ ನಡೆಯುತ್ತವೆ.
ಎಸ್‌.ಎನ್‌.ರವಿಕುಮಾರ್‌ ಎಂಬ ಹೆಸರಿನ ಬೆಂಗಳೂರಿನಲ್ಲಿ ನೆಲೆಸಿರುವ ಶಿಡ್ಲಘಟ್ಟದ ಉಲ್ಲೂರುಪೇಟೆಯ ನಿವಾಸಿ ಪಕ್ಷೇತರನಾಗಿ ಮಂಗಳವಾರ ನಾಮಪತ್ರವನ್ನು ಸಲ್ಲಿಸಿದ್ದಾರೆ. ಕಾಂಗ್ರೆಸ್‌ ಪಕ್ಷದ ಕೆಲ ಮುಖಂಡರು ಹೊರಗೆ ನಿಂತು ಎಸ್‌.ಎನ್‌.ರವಿಕುಮಾರ್‌ ಅವರನ್ನು ಒಳಗೆ ಕಳಿಸುತ್ತಿದ್ದುದು ಕಂಡು ಮೇಲೂರು ಬಿ.ಎನ್‌.ರವಿಕುಮಾರ್‌ ಅವರ ಹೆಸರಿನಲ್ಲಿ ಮತದಾರರಿಗೆ ಗೊಂದಲ ಸೃಷ್ಟಿಸಲು ಕಾಂಗ್ರೆಸಿಗರ ತಂತ್ರವಿದಿ ಎಂದು ಜನರು ಮಾತನಾಡಿಕೊಂಡರು. ಕಾಕತಾಳೀಯವೆಂದರೆ ಎಸ್‌.ಎನ್‌.ರವಿಕುಮಾರ್‌ ತಾಯಿ ಹಿಂದೆ ಪುರಸಭೆಯ ಸದಸ್ಯರಾಗಿದ್ದು, ವಿಧಾನಸಭೆ ಚುನಾವಣೆಗೂ ಸ್ಪರ್ಧಿಸಿದ್ದರು.

error: Content is protected !!