ತಾಲ್ಲೂಕು ಕಚೇರಿಯಲ್ಲಿ ನಡೆಸಲಾಗುತ್ತಿದ್ದ ಆಧಾರ್ ಕಾರ್ಡ್ ತಿದ್ದುಪಡಿಯ ಕಾರ್ಯವನ್ನು ಇದೀಗ ನಗರ ವ್ಯಾಪ್ತಿಯಲ್ಲಿ ಪ್ರಗತಿ ಗ್ರಾಮೀಣ ಬ್ಯಾಂಕ್ಗೆ ನೀಡಲಾಗಿದೆ. ಮೊದಲ ದಿನವೇ ಸುಮಾರು ಐದು ನೂರು ಮಂದಿ ಸಾಲಾಗಿ ನಿಂತು ಟೋಕನ್ ಪಡೆದರು.
‘ಜನರ ಒತ್ತಡ ನಿವಾರಣೆಗಾಗಿ ಟೋಕನ್ ವಿತರಿಸಲಾಗುತ್ತಿದೆ. ದಿನಕ್ಕೆ ಇಪ್ಪತ್ತು ಮಂದಿಯ ತಿದ್ದುಪಡಿ ಮಾಡಬಹುದಾದ್ದರಿಂದ ದಿನಾಂಕವನ್ನು ನಮೂದಿಸಿ ಟೋಕನ್ ನೀಡಿದ್ದೇವೆ. ಜನರು ಸಾಲಾಗಿ ಬಂದು ಟೋಕನ್ ಪಡೆಯಲು ಪೊಲೀಸ್ ಬಂದೋಬಸ್ತ್ ನೀಡಿದ್ದರು’ ಎಂದು ಬ್ಯಾಂಕ್ ಅಧಿಕಾರಿ ಬಿ.ಆರ್.ನಟರಾಜ್ ತಿಳಿಸಿದರು.