Home News ಆರು ತಿಂಗಳಿಂದ ಪೌರಕಾರ್ಮಿಕರಿಗೆ ವೇತನ ನೀಡಿಲ್ಲ

ಆರು ತಿಂಗಳಿಂದ ಪೌರಕಾರ್ಮಿಕರಿಗೆ ವೇತನ ನೀಡಿಲ್ಲ

0

ಕಳೆದ ಆರು ತಿಂಗಳಿಂದ ನಮಗೆ ವೇತನ ನೀಡಿಲ್ಲವೆಂದು ಆರೋಪಿಸಿ ಬುಧವಾರ ಪೌರಕಾರ್ಮಿಕರು ನಗರಸಭೆ ಕಛೇರಿಗೆ ಬೀಗ ಜಡಿದು ಕೆಲಕಾಲ ಪ್ರತಿಭಟನೆ ನಡೆಸಿದರು.
ನಗರದಾದ್ಯಂತ ಸ್ವಚ್ಚತೆ ಕಾರ್ಯ ಸೇರಿದಂತೆ ಕಸ ವಿಲೇವಾರಿ ಮಾಡುವ ಪೌರ ಕಾರ್ಮಿಕರಿಗೆ ಕಳೆದ ಆರು ತಿಂಗಳಿಂದ ಸಂಬಳ ನೀಡಿಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಈವರೆಗೂ ಸಂಬಳ ನೀಡಲು ಯಾವುದೇ ಕ್ರಮ ಜರುಗಿಸಿಲ್ಲ ಎಂದು ಹೇಳಿದರು.
ನಗರದ ನಗರಸಭೆಯಲ್ಲಿ ಕೆಲಸ ಮಾಡುತ್ತಿರುವ ೪೦ ಮಂದಿ ಖಾಯಂ ನೌಕರರು ಸೇರಿದಂತೆ ೬೦ ಮಂದಿ ಗುತ್ತಿಗೆ ನೌಕರರಿಗೆ ಕಳೆದ ಆರು ತಿಂಗಳಿಂದ ಸಂಬಳ ನೀಡಿಲ್ಲವೆಂದು ಆರೋಪಿಸಿದ ಪೌರಕಾರ್ಮಿಕರು ಆರು ತಿಂಗಳು ಸಂಬಳ ನೀಡದೇ ಇದ್ದರೆ ನಾವು ಹೊಟ್ಟೆಗೆ ಏನು ತಿನ್ನುವುದು, ಮಕ್ಕಳ ಶಾಲಾ ಶುಲ್ಕ ಕಟ್ಟುವುದಾದರೂ ಹೇಗೆ. ಕೂಡಲೇ ನಮಗೆ ಬಾಕಿ ಇರುವ ಸಂಬಳ ನೀಡಬೇಕು ಎಂದು ಒತ್ತಾಯಿಸಿ ನಗರಸಭೆ ಬಾಗಿಲು ಹಾಕಿ ಮುಂಭಾಗದಲ್ಲಿ ಧರಣಿ ನಡೆಸಿದರು.
ನಟರಾಜು, ಮುನಿಕೃಷ್ಣ, ವೆಂಕಟೇಶ್, ಕುಮಾರ, ಭೀಮಾ, ಸುರೇಶ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

error: Content is protected !!