Home News ಇ–ಹರಾಜು ಮುಂದೂಡಿಕೆ

ಇ–ಹರಾಜು ಮುಂದೂಡಿಕೆ

0

ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಬುಧವಾರ ಇ–ಹರಾಜು ಪ್ರಾರಂಭವಾಗಬೇಕಿದ್ದುದು ಕೆಲವು ತಾಂತ್ರಿಕ ಕಾರಣಗಳಿಂದ ತಾತ್ಕಾಲಿಕವಾಗಿ ಮುಂದೂಡಲಾಗಿದೆ.
ಸ್ಯಾಮ್ಸಂಗ್ ಕಂಪೆನಿಯ ಎ, ಇ, ಜೆ ಮತ್ತು ಜಡ್ ಸೀರೀಸ್ಗಳ ಮೊಬೈಲ್ ಫೋನ್ಗಳು ಮಾರುಕಟ್ಟೆಯಲ್ಲಿ ಅಳವಡಿಸಿರುವ ವೈಫೈಗೆ ಸ್ಪಂದಿಸದ ಕಾರಣ ರೀಲರುಗಳು ಈ ತಾಂತ್ರಿಕ ತೊಂದರೆಯನ್ನು ಸರಿಪಡಿಸುವಂತೆ ತಿಳಿಸಿದರು. ಮಾರುಕಟ್ಟೆಯ ಅಧಿಕಾರಿಗಳು ಫೋನುಗಳದ್ದೇ ಸಮಸ್ಯೆಯಿರಬಹುದೆಂದಾಗ ರೀಲರುಗಳು, ‘ಸಾವಿರಾರು ರೂಗಳನ್ನು ತೆತ್ತು ಮೊಬೈಲ್ ಫೋನ್ಗಳನ್ನು ಕೊಂಡಿದ್ದೇವೆ. ಈಗಾಗಲೇ ಬಹಳಷ್ಟು ವ್ಯಾಪಾರಸ್ಥರು ಕಷ್ಟದಲ್ಲಿದ್ದಾರೆ. ಅದಲ್ಲದೆ ಕಂಪೆನಿಯವರು ಲಕ್ಷಾಂತರ ಫೋನುಗಳನ್ನು ಯಾವ ಸಮಸ್ಯೆಯೂ ಇಲ್ಲದೆ ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ ಮಾರುಕಟ್ಟೆಯಲ್ಲಿ ಅಳವಡಿಸಿರುವ ವೈಫೈ ಮುಂತಾದವುಗಳ ತಾಂತ್ರಿಕ ತೊಂದರೆಗಳನ್ನು ಮೊದಲು ಸರಿಪಡಿಸಿ. ಆದಷ್ಟು ಬೇಗ ಇ–ಹರಾಜು ಪ್ರಾರಂಭ ಮಾಡಿ’ ಎಂದು ಒತ್ತಾಯಿಸಿದರು.
ರೇಷ್ಮೆ ಇಲಾಖೆಯ ಬೆಂಗಳೂರು ವಿಭಾಗದ ಜಂಟಿ ನಿರ್ದೇಶಕ ಪ್ರಭಾಕರ್ ಮಾತನಾಡಿ, ಸುಮಾರು ಒಂದು ತಿಂಗಳ ಹಿಂದೆ ಇ–ಹರಾಜು ಪ್ರಾರಂಭವಾಗಬೇಕಿತ್ತು. ಈಗಲೂ ತಾಂತ್ರಿಕ ತೊಂದರೆಗಳಿಂದ ತಾತ್ಕಾಲಿಕವಾಗಿ ಮುಂದೂಡಲಾಗುತ್ತಿದೆ. ಆದಷ್ಟು ಬೇಗ ಸಮಸ್ಯೆಯನ್ನು ಸರಿಪಡಿಸಿ ಇ–ಹರಾಜು ಪ್ರಾರಂಭ ಮಾಡುವುದಾಗಿ ಹೇಳಿದರು.
ರೇಷ್ಮೆ ಉಪನಿರ್ದೇಶಕರಾದ ಮೊಯ್ನುದ್ದೀನ್, ಎಂ.ಎನ್.ರತ್ನಯ್ಯಶೆಟ್ಟಿ, ರೀಲರುಗಳಾದ ಡಿ.ಎಂ.ಜಗದೀಶ್ವರ್, ಅಬ್ದುಲ್ ಅಜೀಜ್,ಯೂಸುಫ್, ಎ.ಆರ್. ಅಬ್ದುಲ್ ಅಜೀಜ್, ಜಿ.ರಹಮಾನ್, ಅಕ್ಮಲ್ ಪಾಷ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

error: Content is protected !!