ಶಿಡ್ಲಘಟ್ಟ ತಾಲ್ಲೂಕಿನ ಕೊತ್ತನೂರು ಗ್ರಾಮದಲ್ಲಿ ಊಸರವಳ್ಳಿಯು ದೇಹವನ್ನು ಹಿಂದಕ್ಕೂ ಮುಂದಕ್ಕೂ ತೂಗಾಡಿಸುತ್ತ ವಿಶಿಷ್ಟ ಶೈಲಿಯಲ್ಲಿ ರೆಂಬೆಯಿಂದ ರೆಂಬೆಗೆ ಹೋಗಲು ಪ್ರಯತ್ನಿಸುತ್ತಿತ್ತು. ಇರುವೆಗಳು, ಮಿಡತೆಗಳು ಹಾಗು ಅನೇಕ ಕೀಟಗಳನ್ನು ಭಕ್ಷಿಸುತ್ತಾ ಮಾನವನಿಗೆ ಉಪಕಾರಿಯಾದ ಇದರ ಬಣ್ಣ ಬದಲಿಸುವ ಗುಣವನ್ನು ಬದುಕಿನಲ್ಲಿ ತಮ್ಮ ಬಣ್ಣ ಬದಲಿಸುವ ಪುಡಾರಿಗಳಿಗೆ ಹೋಲಿಸುವುದು ದುರಂತ.