Home News ಕನ್ನಮಂಗಲ ಗ್ರಾಮದ ವೆಂಕಟಲಕ್ಷ್ಮೀ ರಾಮಕೃಷ್ಣ ಅವರಿಗೆ ರಾಜ್ಯ ಮಟ್ಟದ ‘ಸಮಾಜ ಸೇವಾ ರತ್ನ’ ಪ್ರಶಸ್ತಿ

ಕನ್ನಮಂಗಲ ಗ್ರಾಮದ ವೆಂಕಟಲಕ್ಷ್ಮೀ ರಾಮಕೃಷ್ಣ ಅವರಿಗೆ ರಾಜ್ಯ ಮಟ್ಟದ ‘ಸಮಾಜ ಸೇವಾ ರತ್ನ’ ಪ್ರಶಸ್ತಿ

0

ತಾಲ್ಲೂಕಿನ ಕೆ.ಮುತ್ತುಕದಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಶಾ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಿರುವ ಕನ್ನಮಂಗಲ ಗ್ರಾಮದ ವೆಂಕಟಲಕ್ಷ್ಮೀ ರಾಮಕೃಷ್ಣ ಅವರಿಗೆ ರಾಜ್ಯ ಮಟ್ಟದ ‘ಸಮಾಜ ಸೇವಾ ರತ್ನ’ ಪ್ರಶಸ್ತಿ ಲಭಿಸಿದೆ.
ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿ ವತಿಯಿಂದ ಬೆಂಗಳೂರು ರವೀಂದ್ರ ಕಲಾಕ್ಷೇತ್ರ ಆವರಣದ ನಯನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ರಾಜ್ಯಮಟ್ಟದಲ್ಲಿ 21 ಜನರನ್ನು ಗುತಿ೯ಸಿ ಆಯ್ಕೆ ಮಾಡಿದ್ದು, ಅದರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಿಂದ ವೆಂಕಟಲಕ್ಷ್ಮೀ ರಾಮಕೃಷ್ಣ ಅವರು ಸಮಾಜದ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆಗೆ ಗುರುತಿಸಿ ರಾಜ್ಯ ಮಟ್ಟದ ಸಮಾಜ ಸೇವಾ ರತ್ನ ಪ್ರಶಸ್ತಿಯನ್ನು ನೀಡಲಾಯಿತು. ಗ್ರಾಮೀಣ ಭಾಗದಲ್ಲಿ ಒಬ್ಬ ಸಾಮಾನ್ಯ ಮಹಿಳೆಯಾಗಿ ಆರೋಗ್ಯ ಇಲಾಖೆಯಲ್ಲಿ ಸೇವೆಸಲ್ಲಿಸುತ್ತಾ ಸಮಾಜದ ಬಗ್ಗೆ ಅದರಲ್ಲೂ ಮಹಿಳೆಯರ , ಬಾಣಂತಿಗಳಿಗೆ ಉತ್ತಮ ಸೇವೆ ಸಲ್ಲಿಸುವುದರೊಂದಿಗೆ ಉತ್ತಮ ಸೇವೆ ಸಲ್ಲಿಸುತ್ತಿರುವರೆಂದು ಅಭಿನಂದಿಸಲಾಯಿತು.

error: Content is protected !!