ತಾಲ್ಲೂಕಿನ ಯಣ್ಣಂಗೂರು ಗ್ರಾಮದ ರೈತರಾದ ನಾರಾಯಣಸ್ವಾಮಿ, ರಾಮಮೂರ್ತಿ, ನಾಗರಾಜು, ಸುನಂದಮ್ಮ, ವಾಣಿಶ್ರೀ ರವರಿಗೆ ಸೇರಿದ ಹುಲ್ಲು ಬಣವೆಗಳಿಗೆ ಶುಕ್ರವಾರ ಬೆಳಗಿನ ಜಾವ ಯಾರೋ ಕಿಡಿಗೇಡಿಗಳು ಹಚ್ಚಿದ ಬೆಂಕಿಯಿಂದಾಗಿ ಸುಟ್ಟು ಕರಕಲಾಗಿದ್ದು, ಸುಮಾರು ಎರಡೂವರೆ ಲಕ್ಷ ರೂಗಳಷ್ಟು ನಷ್ಟ ಉಂಟಾಗಿದೆ.
ರೈತ ನಾರಾಯಣಸ್ವಾಮಿ ಅವರಿಗೆ ಸೇರಿರುವ ಜಮೀನಿನಲ್ಲಿ ಐದು ಮಂದಿಯಹುಲ್ಲು ಬಣವೆಗಳಿದ್ದವು. ಸ್ವಲ್ಪ ದೂರದಲ್ಲಿನ ಮನೆಯ ರವಿಕುಮಾರ್ ಅವರು ಬೆಂಕಿಯನ್ನು ನೋಡಿಕೊಂಡು ನಾರಾಯಣಸ್ವಾಮಿ ಅವರಿಗೆ ಫೋನ್ ಮಾಡಿ ತಿಳಿಸಿದರು. ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಲಾಯಿತು. ಆದರೂ ಏನೂ ಪ್ರಯೋಜನವಾಗಲಿಲ್ಲ.