ತಾಲ್ಲೂಕಿನ ಕುತ್ತಾಂಡಹಳ್ಳಿ ಗ್ರಾಮದಲ್ಲಿ ದೇವಾಲಯದ ಬೀಗ ಮುರಿದಿರುವ ಕಳ್ಳರು ಹಣ, ಬೆಳ್ಳಿ ಕಿರೀಟ ಕಳವು ಮಾಡಿದ್ದಾರೆ.
ತಾಲ್ಲೂಕಿನ ದೇವರ ಮಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುತ್ತಾಂಡಹಳ್ಳಿ ಗ್ರಾಮದ ಆಂಜನೇಯಸ್ವಾಮಿ ದೇವಾಲಯದಲ್ಲಿ ಭಾನುವಾರ ರಾತ್ರಿ ಬೀಗ ಮುರಿದ ಕಳ್ಳರು, ದೇವರ ಮುಂದ ಇಟ್ಟಿದ್ದ ಹಣ್ಣುಗಳನ್ನು ತಿಂದಿದ್ದಾರೆ. ನಂತರ ಹುಂಡಿಯನ್ನು ತೆಗೆದುಕೊಂಡು ಹೋಗಿ, ಹಣವನ್ನು ದೋಚಿಕೊಂಡು ಹುಂಡಿಯನ್ನು ಸಮೀಪದ ಹಿಪ್ಪುನೇರಳೆ ತೋಟದಲ್ಲಿ ಬಿಸಾಡಿದ್ದಾರೆ.
ದೇವಾಲಯ ಹಳೆಯದಾಗಿದ್ದರಿಂದ ಇತ್ತಿಚೆಗಷ್ಟೇ ದುರಸ್ಥಿಗೊಳಿಸಿ, ಕುಂಭಾಭೀಷೇಕ ಮಾಡಲಾಗಿತ್ತು. ಬೆಳ್ಳಿಕವಚ, ಅಂದಾಜು ೧.೫ ಲಕ್ಷ ಹುಂಡಿ ಹಣ, ದೋಚಿದ್ದಾರೆ ಎಂದು ಗ್ರಾಮದ ಕೃಷ್ಣಪ್ಪ ತಿಳಿಸಿದ್ದಾರೆ.
ಸ್ಥಳಕ್ಕೆ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ ಬಂದು ಪರಿಶೀಲನೆ ನಡೆಸಿದ್ದಾರೆ.