ತಾಲ್ಲೂಕಿನ ಚೀಮಂಗಲ ಪಂಚಾಯಿತಿಯ ಯಣ್ಣೂರು ಗ್ರಾಮದಲ್ಲಿ ಗ್ರಾಮಸ್ಥರೆಲ್ಲ ಒಗ್ಗೂಡಿ ಕೊರೊನಾ ಮಹಾಮಾರಿಯನ್ನು ತಡೆಗಟ್ಟಲು ಹಲವು ನಿಯಮಗಳನ್ನು ಹಾಕಿಕೊಂಡಿದ್ದಾರೆ.
ಬೆಂಗಳೂರು ಅಥವಾ ಇತರೆಡೆಗಳಿಂದ ಗ್ರಾಮಕ್ಕೆ ಹೊರಗಿನವರು ಬರದಂತೆ ಎಲ್ಲಾ ಸಂಪರ್ಕ ರಸ್ತೆಗಳಿಗೂ ಮುಳ್ಳುಬೇಲಿ ಹಾಕಿದ್ದಾರೆ. ಹಾಲು ಒಕ್ಕೂಟದ ಸಹಕಾರ ಸಂಘದಲ್ಲಿ ಹಾಲು ಹಾಕಲು ಬರುವವರು ಇಂದು ಮೀಟರ್ ಅಂತರವನ್ನು ಕಾಯ್ದುಕೊಳ್ಳುವಂತೆ ಗುರುತುಗಳನ್ನು ಹಾಕಿದ್ದು, ಅದನ್ನು ಎಲ್ಲರೂ ಖಡ್ಡಾಯವಾಗಿ ಪಾಲಿಸುವಂತೆ ಸೂಚನೆ ನೀಡಲಾಗಿದೆ. ಯಾರೂ ಮನೆಗಳಿಂದ ಅನವಶ್ಯಕವಾಗಿ ಹೊರಬರಬಾರದು, ಗುಂಪುಗೂಡಬಾರದೆಂದು ತಿಳಿಸಲಾಗಿದೆ.
ಗ್ರಾಮವನ್ನು ಸ್ವಚ್ಛಗೊಳಿಸಲಾಗಿದ್ದು, ಚರಂಡಿಗಳಿಗೆ ಬ್ಲೀಚಿಂಗ್ ಪೌಡರ್ ಸಿಂಪಡಿಸಲಾಗಿದೆ.