Home News ನಗರದ ನಾಲ್ವರು ಕರಾಟೆಪಟುಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ

ನಗರದ ನಾಲ್ವರು ಕರಾಟೆಪಟುಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ

0

ನಗರದ ನಾಲ್ವರು ವಿದ್ಯಾರ್ಥಿಗಳು ಗುಜರಾತ್ನ ಸೂರತ್ನಲ್ಲಿ ನಡೆಯಲಿರುವ ಏಳನೇ ಅಕ್ಷಯ್ಕುಮಾರ್ ಇನ್ವಿಟೇಷನಲ್ ಕೂಡೋ ಚಾಂಪಿಯನ್ಶಿಪ್ಗೆ ಆಯ್ಕೆಯಾಗಿದ್ದಾರೆ.
ಜಯಸಿಂಹ, ಟಿ.ಎನ್.ಹೇಮಂತ್, ಓಂ ದೇಶಮುದ್ರೆ ಮತ್ತು ಸಮೀರ್ಪಾಷ ರಾಷ್ಟ್ರಮಟ್ಟದಲ್ಲಿ ನಡೆಯುವ ಕೂಡೋ ಚಾಂಪಿಯನ್ಶಿಪ್ಗೆ ಆಯ್ಕೆಯಾದ ಕರಾಟೆಪಟುಗಳಾಗಿದ್ದಾರೆ ಎಂದು ಕೂಡೋ ಅಸೋಸಿಯೇಷನ್ ಆಫ್ ಕರ್ನಾಟಕದ ರಾಜ್ಯ ಅಧ್ಯಕ್ಷ ಜಬೀವುಲ್ಲಾ ತಿಳಿಸಿದ್ದಾರೆ.
ಸೂರತ್ನ ಎ ಸಿ ಡೋಮ್ನಲ್ಲಿ ನವೆಂಬರ್ 5 ರಿಂದ 8 ರವರೆಗೂ ನಡೆಯುವ ಕೂಡೋ ಚಾಂಪಿಯನ್ಶಿಪ್ಗೆ ಜಿಲ್ಲೆಯಿಂದ ಇಬ್ಬರು ತರಬೇತುದಾರರೂ ಸೇರಿದಂತೆ 18 ಮಂದಿ ತೆರಳುತ್ತಿರುವುದಾಗಿ ಅವರು ತಿಳಿಸಿದ್ದಾರೆ.