Home News ನಗರಸಭೆಯಲ್ಲಿ ಸಹಾಯಧನ ಚೆಕ್ ವಿತರಣೆ

ನಗರಸಭೆಯಲ್ಲಿ ಸಹಾಯಧನ ಚೆಕ್ ವಿತರಣೆ

0

ನಗರಸಭೆಯಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಗಣರಾಜೋತ್ಸವ ಕಾರ್ಯಕ್ರಮದ ಅಂಗವಾಗಿ ನಗರಸಭೆ ವತಿಯಿಂದ ಪೌರಕಾರ್ಮಿಕರಿಗೆ ಪ್ರತಿದಿನ ಬೆಳಿಗ್ಗೆ ಉಪಹಾರ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ವೈಯಕ್ತಿಕ ಶೌಚಾಲಯವನ್ನು ನಿರ್ಮಿಸಿರುವ 54
ಫಲಾನುಭವಿಗಳಿಗೆ ತಲಾ ೫,೩೩೦ ರೂಗಳ ಸಹಾಯಧನದ ಚೆಕ್ಕನ್ನು ಈ ಸಂದರ್ಭದಲ್ಲಿ ನೀಡಲಾಯಿತು.
ಕಳೆದ ಕೆಲವು ತಿಂಗಳಿಂದೆ ಸುರಿದ ಧಾರಕಾರ ಮಳೆಯಿಂದ ಹಾನಿಗೊಳಗಾದ ನಗರದ ೨೦ ಕುಟುಂಬಗಳಿಗೆ ೬-೮ ಸಾವಿರದವರೆಗೆ ಸಹಾಯಧನ ವಿತರಿಸಲಾಯಿತು.
ನಗರಸಭೆಯ ೨೪:೧೦ ರ ಯೋಜನೆಯಲ್ಲಿ ಎಸ್,ಸಿ, ಎಸ್,ಟಿ ಹಾಗೂ ಸಾಮಾನ್ಯ ವರ್ಗಕ್ಕೆ ಸೇರಿದ ೩೦ ಕುಟುಂಬಗಳಿಗೆ ಒಟ್ಟು೧,೧೦.೬೧೦ರೂಗಳ ಸಹಾಯಧನವನ್ನು ನೀಡಲಾಯಿತು.
ಶಾಸಕ ಎಂ.ರಾಜಣ್ಣ, ನಗರಸಭೆ ಅಧ್ಯಕ್ಷೆ ಮುಷ್ಠರಿ ತನ್ವೀರ್,ಉಪಾಧ್ಯಕ್ಷೆ ಸುಮಿತ್ರ ರಮೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ನಂದ ಕಿಶನ್, ನಗರಸಭೆ ಪೌರಾಯುಕ್ತ ಹರೀಶ್, ಸದಸ್ಯರಾದ ಅಫ್ಸರ್ ಪಾಷ, ಲಕ್ಷ್ಮಣ, ಸಿಕಂದರ್, ವೆಂಕಟಸ್ವಾಮಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

error: Content is protected !!