Home News ನಾಗರಿಕರ ಮೇಲೆ ನಾಯಿಯ ದಾಳಿ

ನಾಗರಿಕರ ಮೇಲೆ ನಾಯಿಯ ದಾಳಿ

0

ಪಟ್ಟಣದಲ್ಲಿ ಸೋಮವಾರ ನಾಯಿಯೊಂದು ನಾಗರಿಕರ ಮೇಲೆ ಧಾಳಿ ನಡೆಸಿದ್ದು ಸುಮಾರು 23 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ನಾಯಿಯ ಕಡಿತಕ್ಕೊಳಗಾದ ವಯಸ್ಸಾದ ಮಹಿಳೆಯೊಬ್ಬರನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಕಳುಹಿಸಲಾಗಿದೆ.
ಬೆಳಿಗ್ಗೆ ಬಸ್ನಿಲ್ದಾಣದ ಬಳಿ ಕುಮಾರ್ ಎಂಬುವವರನ್ನು, ರೇಷ್ಮೆ ಗೂಡು ಮಾರ್ಕೆಟ್ ಬಳಿ ರಮೇಶ್, 23 ನೇ ವಾರ್ಡ್ ಬಳಿ ನಾಗರಾಜ್ ಸೇರಿದಂತೆ ಹಲವರನ್ನು ಗಾಯಗೊಳಿಸಿರುವ ನಾಯಿಯ ಗುರುತನ್ನು ಎಲ್ಲರೂ ಒಂದೇ ಹೇಳಿರುವುದರಿಂದ ಒಂದೇ ನಾಯಿಯು ಕಚ್ಚುತ್ತಿದೆ ಎಂದು ಆಸ್ಪತ್ರೆಯ ಚಿಕಿತ್ಸಕರು ತಿಳಿಸಿದ್ದಾರೆ.
‘ಬೆಳಿಗ್ಗೆ ಎಂಟರಿಂದ ಕಂದು ಬಣ್ಣದ ಬಿಳಿ ಮಚ್ಚೆಯುಳ್ಳ ನಾಯಿ, ಬಸ್ ನಿಲ್ದಾಣ, ಕೋಟೆ ವೃತ್ತ, ಕೆನರಾ ಬ್ಯಾಂಕ್, ಕುರುಬರ ಪೇಟೆ, ಕಾಂಗ್ರೆಸ್್ ಭವನ ರಸ್ತೆ, ರೇಷ್ಮೆ ಗೂಡಿನ ಮಾರುಕಟ್ಟೆ ಮುಂತಾದೆಡೆ ತಿರುಗುತ್ತಾ, ಹುಚ್ಚು ಹಿಡಿದಂತೆ ಹಲವರನ್ನು ಕಚ್ಚುತ್ತಿರುವ ಸುದ್ಧಿ ಎಲ್ಲೆಡೆ ಹಬ್ಬಿದ್ದರೂ ಪುರಸಭೆಯವರು ಕ್ರಮ ಕೈಗೊಳ್ಳದಿರುವುದು ದುರದೃಷ್ಟಕರ’ ಎಂದು ನಾಯಿಯ ಕಡಿತಕ್ಕೊಳಗಾದವರು ನುಡಿದರು.

error: Content is protected !!