Home News ನಿವೇಶನ ಹೊಂದಿರುವವರಿಗೆ ಸ್ವಂತ ಮನೆಯನ್ನು ನಿರ್ಮಿಸಿಕೊಡಲಾಗುವುದು – ಶಾಸಕ ವಿ.ಮುನಿಯಪ್ಪ

ನಿವೇಶನ ಹೊಂದಿರುವವರಿಗೆ ಸ್ವಂತ ಮನೆಯನ್ನು ನಿರ್ಮಿಸಿಕೊಡಲಾಗುವುದು – ಶಾಸಕ ವಿ.ಮುನಿಯಪ್ಪ

0

ನಗರದ ೧೭ನೇ ವಾರ್ಡಿನ ರಹಮತ್ ನಗರದಲ್ಲಿ ನಗರಸಭೆ ಹಾಗೂ ಕೊಳಚೆ ಪ್ರದೇಶ ಅಭಿವೃದ್ದಿ ಮಂಡಳಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಎಲ್ಲರಿಗೂ ಸೂರು ಯೋಜನೆಯಡಿ ನಿವೇಶನ ಹೊಂದಿರುವ, ಮನೆ ಇಲ್ಲದವರಿಗೆ ಮನೆ ನಿರ್ಮಿಸಿಕೊಡಲು ನಿವೇಶನ ಹಸ್ತಾಂತರ ಕಾರ್ಯಕ್ರಮದಲ್ಲಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ನಗರ ವ್ಯಾಪ್ತಿಯಲ್ಲಿ ಮನೆ ಇಲ್ಲದೆ ನಿವೇಶನ ಹೊಂದಿರುವವರಿಗೆ ಸ್ವಂತ ಮನೆಯನ್ನು ನಿರ್ಮಿಸಿಕೊಡಲಾಗುವುದು ಎಂದು ಅವರು ತಿಳಿಸಿದರು.
ನಗರದಲ್ಲಿ ಮೊದಲ ಹಂತದಲ್ಲಿ ೫೦೦ ಮಂದಿ ಮನೆ ಇಲ್ಲದ ನಿವೇಶನ ಹೊಂದಿರುವವರಿಗೆ, ಪ್ರತಿಯೊಬ್ಬರಿಗೂ ೪.೬ ಲಕ್ಷ ರೂ.ವೆಚ್ಚದಲ್ಲಿ ಮನೆ ನಿರ್ಮಿಸಿ ಕೊಡಲಾಗುವುದು. ನಂತರದ ಅವಧಿಯಲ್ಲಿ ಉಳಿದ ಎಲ್ಲರಿಗೂ ಮನೆಗಳನ್ನು ಕಟ್ಟಿ ಕೊಡಲಾಗುವುದು ಎಂದರು.
ಮನೆ ಪಡೆಯುವ ಫಲಾನುಭವಿಗಳಲ್ಲಿ ಸಾಮಾನ್ಯ ವರ್ಗದವರು ಶೇ ೧೫ರಷ್ಟು, ಪರಿಶಿಷ್ಟ ಜಾತಿ ಪಂಗಡದವರು ಶೇ ೧೦ರಷ್ಟು ವಂತಿಗೆಯನ್ನು ಪಾವತಿಸಬೇಕಾಗುತ್ತದೆ. ಕೇಂದ್ರ ಸರ್ಕಾರ ೧.೫ ಲಕ್ಷ ರೂ ಹಣ ನೀಡಿದರೆ ಇನ್ನುಳಿದ ಹಣವನ್ನು ರಾಜ್ಯ ಸರ್ಕಾರ ಹೊಂದಿಸಲಿದೆ ಎಂದು ಹೇಳಿದರು.
ನಗರದ ಹೊರವಲಯದಲ್ಲಿ ಈಗಾಗಲೆ ೨೫ ಎಕರೆ ಜಮೀನನ್ನು ಖರೀಸಿದ್ದು, ಇನ್ನೂ ೧೫ ಎಕರೆಯಷ್ಟು ಜಮೀನನ್ನು ಖರೀದಿಸಿ ನಿವೇಶನ ಹಂಚಲಾಗುವುದು. ಇದರಿಂದ ಎಲ್ಲರೂ ಸ್ವಂತ ಮನೆ ಹೊಂದಿ ಇತರರಂತೆ ಸ್ವಾಭಿಮಾನದ ಬದುಕು ನಡೆಸಲು ಸಾಧ್ಯವಾಗಲಿದೆ ಎಂದರು.
ಈ ಸಂದರ್ಭದಲ್ಲಿ ೧೭ನೇ ವಾರ್ಡಿನ ಹಲವರಿಗೆ ಮನೆ ಮಂಜೂರಾತಿ ಪತ್ರಗಳನ್ನು ವಿತರಿಸಲಾಯಿತು.
ಕೊಳಚೆ ನಿರ್ಮೂಲನಾ ಮಂಡಳಿಯ ಕಾರ್ಯನಿರ್ವಾಹಕ ಅಭಿಯಂತರ ಹನುಮಂತರೆಡ್ಡಿ, ನಗರಸಭೆ ಪೌರಾಯುಕ್ತ ಚಲಪತಿ, ನಗರಸಭೆ ಸದಸ್ಯರಾದ ಮುಷ್ಠರಿತನ್ವೀರ್, ಚಿಕ್ಕಮುನಿಯಪ್ಪ, ಬಾಲಕೃಷ್ಣ ಹಾಜರಿದ್ದರು.

error: Content is protected !!