Home News ಬಿಜೆಪಿ ಪಕ್ಷದಿಂದ ದಲಿತರ ಮನೆಯಲ್ಲಿ ಊಟ

ಬಿಜೆಪಿ ಪಕ್ಷದಿಂದ ದಲಿತರ ಮನೆಯಲ್ಲಿ ಊಟ

0

ಸಮಾಜದಲ್ಲಿ ಸಾಮರಸ್ಯ ಸಹಭಾಳ್ವೆಯನ್ನು ವ್ಯಕ್ತಿಗತವಾಗಿ ಪಾಲಿಸುವ ಮೂಲಕ ಇತರರಿಗೆ ಪ್ರೇರಣೆ ನೀಡೋಣ ಎಂದು ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಿ.ಸಿ.ನಂದೀಶ್ ತಿಳಿಸಿದರು.
ನಗರದ ಸಿದ್ಧಾರ್ಥನಗರದ ತಾಲ್ಲೂಕು ಎಸ್ಸಿ ಮೋರ್ಚಾ ಅಧ್ಯಕ್ಷೆ ಮುನಿರತ್ನಮ್ಮ ಅವರ ಮನೆಯಲ್ಲಿ ಗುರುವಾರ ರಾತ್ರಿ ಬಿಜೆಪಿ ಪಕ್ಷದ ವತಿಯಿಂದ ಅಂಬೇಡ್ಕರ್ ಅವರ 125ನೇ ವರ್ಷಾಚರಣೆಯ ಪ್ರಯುಕ್ತ ನಡೆಸಿದ ‘ಸಾಮಾಜಿಕ ಸಾಮರಸ್ಯ’ ಎಂಬ ಸಹಬೋಜನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜದ ಶೋಷಿತ ವರ್ಗಗಳ ಪರವಾಗಿ ಬಸವಣ್ಣನವರು ನಿಂತು, ಯಾವುದೇ ಜಾತಿ, ಧರ್ಮ ಎಂಬುದಿಲ್ಲ, ಎಲ್ಲರೂ ಸಮಾನರು ಎಂದು ಸಾರಿದ್ದರು. ಬಸವಣ್ಣ ಬುದ್ಧ ಅಂಬೇಡ್ಕರ್ ಅವರ ಜೀವನಾದರ್ಶಗಳು ನಮಗೆ ಪ್ರೇರಣೆಯಾಗಬೇಕು. ಅಂಬೇಡ್ಕರ್ ಅವರ 125ನೇ ವರ್ಷಾಚರಣೆಯನ್ನು ಅವರ ಆದರ್ಶ ಪಾಲಿಸುವುದರೊಂದಿಗೆ ಹಲವು ಕಾರ್ಯಕ್ರಮಗಳನ್ನು ಬಿಜೆಪಿ ತಾಲ್ಲೂಕು ಘಟಕದ ಮೂಲಕ ಹಮ್ಮಿಕೊಳ್ಳಲಾಗುತ್ತಿದೆ. ಸಿದ್ದಾರ್ಥನಗರದಲ್ಲಿಯೇ ಉಚಿತ ಆರೋಗ್ಯ ಶಿಬಿರವನ್ನು ಮುಂದಿನ ದಿನಗಳನ್ನು ನಡೆಸಲಾಗುವುದು ಎಂದು ಹೇಳಿದರು.
ಬಿಜೆಪಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಮುನಿರಾಜು, ಲೋಕೇಶ್ಗೌಡ, ಪುರುಷೋತ್ತಮ್, ಮಂಜುಳಮ್ಮ, ಎಸ್.ರಾಘವೇಂದ್ರ, ದಾಮೋದರ್, ಅಶ್ವಕ್ ಅಹ್ಮದ್, ಸುಜಾತಮ್ಮ, ಸಾವಿತ್ರಮ್ಮ, ರವಿಕುಮಾರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.