Home News ಬೆಸ್ತರ ಸಂಘದಿಂದ ಬೈಕ್ ರ್ಯಾಲಿ

ಬೆಸ್ತರ ಸಂಘದಿಂದ ಬೈಕ್ ರ್ಯಾಲಿ

0

ತಾಲ್ಲೂಕಿನ ಬೆಸ್ತರ ಸಂಘದಿಂದ ಬುಧವಾರ ಶಾಶ್ವತ ಹೋರಾಟಕ್ಕೆ ಬೆಂಬಲಿಸಿ ಬೈಕ್ ರ್ಯಾಲಿ ನಡೆಸಿ ತಹಶೀಲ್ದಾರರಿಗೆ ಮನವಿಯನ್ನು ಸಲ್ಲಿಸಲಾಯಿತು.
ಚಿಕ್ಕಬಳ್ಳಾಪುರದ ಚದಲಪುರದ ಬಳಿ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಶಾಶ್ವತ ನೀರಾವರಿ ಹೋರಾಟಕ್ಕೆ ಬೆಂಬಲಿಸಿ ಬೈಕ್ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ. ಬಯಲುಸೀಮೆಯ ನಮ್ಮ ಭಾಗದ ಜನರಿಗೆ ನೀರಿನ ಅಭಾವ ಬಹಳಷ್ಟಿದ್ದು, ಸಾವಿರಾರು ಅಡಿ ಕೊಳವೆ ಬಾವಿಯನ್ನು ಕೊರೆದರೂ ನೀರು ಸಿಗದಂತಾಗಿದೆ. ಶಾಶ್ವತ ನೀರಾವರಿ ಜಾರಿಯಾಗದಿದ್ದಲ್ಲಿ ಜನರು ಹಾಗೂ ಜಾನುವಾರುಗಳು ಸಂಕಷ್ಟವನ್ನೆದುರಿಸಲಿದ್ದಾರೆ. ಈ ಕೂಡಲೇ ಸರ್ಕಾರ ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.
ಬೆಸ್ತರ ಸಂಘದ ವತಿಯಿಂದ ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿ, ಚಿಕ್ಕಬಳ್ಳಾಪುರದ ಚದಲಪುರದ ಬಳಿಗೆ ಬೈಕ್ ರ್ಯಾಲಿ ಮೂಲಕ ತೆರಳಿದರು.
ಬೆಸ್ತರ ಸಂಘದ ಜಿಲ್ಲಾಧ್ಯಕ್ಷ ಕೆ.ಜಯರಾಮ್, ತಾಲ್ಲೂಕು ಅಧ್ಯಕ್ಷ ಬಾಲಾಜಿ ಕೃಷ್ಣಮೂರ್ತಿ, ಲಕ್ಷ್ಮೀನಾರಾಯಣ, ನ್ಯಾತಪ್ಪ, ಮುರಳಿ, ಎಚ್.ಎನ್.ಗೋಪಾಲ್, ಮೋಹನ್ಕುಮಾರ್, ನಾರಾಯಣಸ್ವಾಮಿ, ವೆಂಕಟರಾಯಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

error: Content is protected !!