Home News ಮಕ್ಕಳಿಗೆ ರಂಗಭೂಮಿಯ ಪರಿಚಯ ಅತ್ಯಗತ್ಯ

ಮಕ್ಕಳಿಗೆ ರಂಗಭೂಮಿಯ ಪರಿಚಯ ಅತ್ಯಗತ್ಯ

0

ನಾಟಕದಂತಹ ಸೃಜನಶೀಲ ಕಲಾ ಮಾಧ್ಯಮದ ಮೂಲಕ ಮಕ್ಕಳಿಗೆ ಪಠ್ಯೇತರ ವಿಷಯಗಳ ಕಲಿಕೆ ಸಾಧ್ಯ ಎಂದು ಕವಿ, ನಾಟಕಕಾರ, ಹೋರಾಟಗಾರ ಹಾಗೂ ಸಂಸ್ಕೃತಿ ಚಿಂತಕ ಕೋಟಿಗಾನಹಳ್ಳಿ ರಾಮಯ್ಯ ತಿಳಿಸಿದರು.
ನಗರದ ವಾಸವಿ ವಿದ್ಯಾಸಂಸ್ಥೆಯ ಆವರಣದಲ್ಲಿ ಭಾನುವಾರ ರಾತ್ರಿ ನಡೆದ ಬೇಸಿಗೆ ಶಿಬಿರ ಜೀರಂಗಿ ಮೇಳದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಮನೆಯಲ್ಲಿ ನಡೆಯುವ ಕಲಿಕೆಗಿಂತ ಹತ್ತಾರು ಮಕ್ಕಳೊಂದಿಗೆ ಶಿಬಿರದಲ್ಲಿ ಸೇರಿದಾಗ ಮಗುವು ಹೆಚ್ಚು ಕ್ರಿಯಾಶೀಲವಾಗುತ್ತದೆ. ಸಮಾಜದ ಬಗ್ಗೆ ಗ್ರಹಿಕೆಯೂ ಉಂಟಾಗುತ್ತದೆ. ಕನ್ನಡ ರಂಗಭೂಮಿಯ ಕೊಡುಗೆಗಳು ಅಪಾರ. ಮಕ್ಕಳಿಗೆ ಈ ಕಲೆಯ ಪರಿಚಯ ಅತ್ಯಗತ್ಯ ಎಂದು ಹೇಳಿದರು. ಜನಪದ ಗಾಯಕ ಮುನಿರೆಡ್ಡಿ ಜನಪದ ಗೀತೆಗಳನ್ನು ಹಾಡಿ ಮನರಂಜಿಸಿದರು.
‘ಜೀರಂಗಿ ಮೇಳ’ ಬೇಸಿಗೆ ಶಿಬಿರದಲ್ಲಿ ಭಾಗವಹಿಸಿದ್ದ ಮಕ್ಕಳು, ಡೊಳ್ಳು ಕುಣಿತ, ಕೋಲಾಟ, ಗಾಯನ, ‘ಕಲ್ ಕಮಲ್ ಕಲೆ ಪರಾಕ್’ ಮತ್ತು ‘ಹಕ್ಕಿ ಹಾಡು’ ನಾಟಕವನ್ನು ಪ್ರದರ್ಶಿಸಿದರು.
ಈಧರೆ ತಿರುಮಲ ಪ್ರಕಾಶ್, ಸತ್ಯನಾರಾಯಣಶೆಟ್ಟಿ, ರಾಮಾಂಜಿನಪ್ಪ, ದೇವರಾಜು, ಈಶ್ವರ್ ಸಿಂಗ್, ನಾಟಕ ನಿರ್ದೇಶಕರಾದ ಬಿ.ಆರ್.ಗೋಪಿನಾಥ್, ಹರೀಶ್ ಆದೀಮ, ಕೆ.ವಿ.ನಾಯಕ ಆಮಾಸ ಮತ್ತಿತರರು ಹಾಜರಿದ್ದರು.

error: Content is protected !!