ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಮತ ಚಲಾಯಿಸಲೆಂದು ಬರುತ್ತಿದ್ದವರ ಕಾರು ಬಾವಿಯಲ್ಲಿ ಬಿದ್ದ ಪ್ರಕರಣ ತಾಲ್ಲೂಕಿನ ಕಂಬದಹಳ್ಳಿ ಗ್ರಾಮದಲ್ಲಿ ನಡೆದಿದ್ದು, ಪ್ರಯಾಣಿಸುತ್ತಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಪ್ರತಿಯೊಂದು ಮತವೂ ಅಮೂಲ್ಯವಿರುವ ಕಾರಣ ಕಂಬದಹಳ್ಳಿಯಲ್ಲಿ ಮತ ಹಾಕಿಸಲು ಮತದಾರರನ್ನು ಸಂಜೆ 5 ಗಂಟೆಯೊಳಗೆ ತಲುಪಬೇಕೆಂದು ದೇವನಹಳ್ಳಿಯಿಂದ ಕರೆತರುತ್ತಿದ್ದಾಗ ಕಾರಿನ ಚಕ್ರ ಪಂಚರ್ರಾದ ಕಾರಣ ಚಾಲಕನ ಹತೋಟಿ ತಪ್ಪಿ ರಸ್ತೆ ಬದಿಯಲ್ಲಿದ್ದ ಬಾವಿಗೆ ಕಾರು ಬಿದ್ದಿದೆ. ತಕ್ಷಣ ಗ್ರಾಮಸ್ಥರು ಹಗ್ಗ ಮತ್ತು ಗೋಣಿಚೀಲಗಳನ್ನು ಬಳಸಿ ಸಹಾಯದಿಂದ ಕಾರಿನಲ್ಲಿದ್ದವರನ್ನು ಮೇಲೆತ್ತಿದ್ದಾರೆ.