Home News ಮುಖಪುಟ ವಿನ್ಯಾಸ ಒಂದು ವಿಶಿಷ್ಟ ಕಲೆ

ಮುಖಪುಟ ವಿನ್ಯಾಸ ಒಂದು ವಿಶಿಷ್ಟ ಕಲೆ

0

ಮುಖಪುಟ ವಿನ್ಯಾಸವೆಂಬುದನ್ನು ಒಂದು ವಿಶಿಷ್ಟ ಕಲೆ. ಚಿತ್ರಕಲೆಯಂತೆಯೇ ಇದೂ ಕೂಡ ಕಲಾಕೃತಿಯೆಂಬಂತೆ ಒಪ್ಪಬಹುದು. ಮುಖಪುಟ ಕಲೆಯಲ್ಲಿ ಹೇರಳವಾದ ಪ್ರಯೋಗಗಳು ನಡೆಯುತ್ತಿವೆ ಎಂದು ಮುಖಪುಟ ವಿನ್ಯಾಸಕ ಅಜಿತ್ ಕೌಂಡಿನ್ಯ ತಿಳಿಸಿದರು.
ನಗರದ ಕ್ರೆಸೆಂಟ್ ವಿದ್ಯಾಸಂಸ್ಥೆಯಲ್ಲಿ ಶನಿವಾರ ಕನ್ನಡ ಸಾರಸ್ವತ ಪರಿಚಾರಿಕೆ ವತಿಯಿಂದ ಆಯೋಜಿಸಿದ್ದ ದಿವಂಗತ ವಿಜ್ಞಾನಿ ಹರೀಶ್ ಆರ್ ಭಟ್ ಅವರ ಶ್ರದ್ಧಾಂಜಲಿ ಹಾಗೂ ಸಂಸ್ಮರಣಾ ಕಾರ್ಯಕ್ರಮದಲ್ಲಿ ಮುಖಪುಟ ವಿನ್ಯಾಸಗಳನ್ನು ಪ್ರದರ್ಶಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ವಿವಿಧ ಪಕ್ಷಿಗಳ ಛಾಯಾಚಿತ್ರಗಳನ್ನು ವೀಕ್ಷಿಸಿದರು

ಮುಖಪುಟ ವಿನ್ಯಾಸ ಮಾಡುವುದು ಕೂಡ ಅತ್ಯಂತ ಸೃಜನಶೀಲತೆಯಿಂದ ಕೂಡಿರುತ್ತದೆ. ಕಲೆಯ ಅಭಿವ್ಯಕ್ತಿಗೆ ತಂತ್ರಜ್ಞಾನವನ್ನು ಪೂರಕವಾಗಿ ಬಳಸಿಕೊಳ್ಳಬಹುದು. ಆದರೆ ತಂತ್ರಜ್ಞಾನಕ್ಕೂ ಮಿಗಿಲಾಗಿ ಕಲಾವಿದನ ಆಲೋಚನಾ ಕ್ರಮ, ಸೃಜನಶೀಲತೆ, ಚಿಂತನೆ, ಬಣ್ಣಗಳ ಆಯ್ಕೆ, ಅಭಿವ್ಯಕ್ತಿ ಎಲ್ಲವೂ ಬಹಳ ಮುಖ್ಯ. ಮುಖಪುಟ ರಚಿಸುವಾಗ ಹಲವಾರು ಸವಾಲುಗಳಿರುತ್ತವೆ. ಓದುಗ ಖರೀದಿಸಲು ಆಕರ್ಷಕವಾಗಿರುವಂತೆಯೇ ಪುಸ್ತಕದ ಆಶಯವನ್ನೂ ಅದು ಬಿಂಬಿಸಬೇಕು ಎಂದು ಹೇಳಿದರು.
ಮುಖಪುಟ ವಿನ್ಯಾಸ ಬೆಳೆದು ಬಂದ ಬಗೆ, ಕಲಾವಿದನಾಗಿ ತಮಗೆ ಆದ ಅನುಭವಗಳ ಬಗ್ಗೆ ಅವರು ವಿವರಿಸಿದರು.
ವಿದ್ಯಾರ್ಥಿಗಳು ವಿವಿಧ ಪಕ್ಷಿಗಳ ಛಾಯಾಚಿತ್ರಗಳನ್ನು ವೀಕ್ಷಿಸಿದರು

‘ಶಿಡ್ಲಘಟ್ಟ ತಾಲ್ಲೂಕಿನ ಜೀವವೈವಿಧ್ಯ’ ಎಂಬ ವಿಷಯವಾಗಿ ಮಾತನಾಡಿದ ವನ್ಯಜೀವಿ ಛಾಯಾಗ್ರಾಹಕ ಡಿ.ಜಿ.ಮಲ್ಲಿಕಾರ್ಜುನ, ಹಕ್ಕಿಗಳು, ಹಾವುಗಳು, ಕೀಟಗಳು ಮುಂತಾದ ಚಿತ್ರಗಳನ್ನು ಸ್ಲೈಡ್ ಶೋ ಮೂಲಕ ಪ್ರದರ್ಶಿಸಿ ವಿವರಿಸಿದರು.
ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿ, ದಿವಂಗತ ವಿಜ್ಞಾನಿ ಹರೀಶ್ ಆರ್ ಭಟ್ ಅವರ ಸಾಧನೆ, ಕೊಡುಗೆ, ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಅವರು ನೀಡಿರುವ ಪ್ರೇರಣೆ ಹಾಗೂ ಅವರ ಒಡನಾಟದ ಬಗ್ಗೆ ಹೇಳಿದರು.
ಕ್ರೆಸೆಂಟ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ತಮೀಮ್ ಅನ್ಸಾರಿ, ಕನ್ನಡ ಸಾರಸ್ವತ ಪರಿಚಾರಿಕೆ ಕಾರ್ಯದರ್ಶಿ ಎ.ಎಂ.ತ್ಯಾಗರಾಜ್, ಹೋಟೆಲ್ ವ್ಯವಸ್ಥಾಪಕ ವಿ.ವೆಂಕಟರಮಣ, ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.
 

error: Content is protected !!