Home News ಯೋಗಬಂಧುಗಳ ವಿಶೇಷ ಪ್ರತಿಭಟನೆ ಮತ್ತು ಭಜನೆ

ಯೋಗಬಂಧುಗಳ ವಿಶೇಷ ಪ್ರತಿಭಟನೆ ಮತ್ತು ಭಜನೆ

0

ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಮಂಗಳವಾರ ರಾತ್ರಿ ಶಿವರಾತ್ರಿ ಪ್ರಯುಕ್ತ ವಿಶೇಷ ಪ್ರತಿಭಟನೆ, ಭಜನೆ ಹಾಗೂ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಈಚೆಗೆ ಮೈಸೂರಿನಲ್ಲಿ ಪ್ರಗತಿಪರ ಚಿಂತಕರೆಂದು ಗುರುತಿಸಿಕೊಂಡಿರುವ ಪ್ರೊ.ಅರವಿಂದ ಮಾಲಗಿತ್ತಿ, ಪ್ರೊ.ಕೆ.ಎಸ್.ಭಗವಾನ್ ಮತ್ತು ಡಾ.ಬಂಜಗೆರೆ ಜಯಪ್ರಕಾಶ್ ಅವರು ಪವಿತ್ರ ಗ್ರಂಥ ಭಗವದ್ಗೀತೆಯ ಕುರಿತು ಆಡಿರುವ ಅವಹೇಳನಕಾರಿ ಮಾತುಗಳಿಂದ ಹಿಂದುಗಳ ಧಾರ್ಮಿಕ ಶ್ರದ್ಧೆಗೆ ಅಪಮಾನವಾಗಿದೆ. ಇಂಥಹ ಮೇಧಾವಿಗಳಿಗೆ ಈಶ್ವರ ಒಳ್ಳೆಯ ಬುದ್ಧಿ ನೀಡಿ, ಇತರರ ನಂಬಿಕೆಗೂ ಗೌರವ ನೀಡುವ ತಿಳುವಳಿಕೆ ನೀಡಲಿ, ಕೆಟ್ಟ ಮಾತು ಆಡದಂತಾಗಲಿ ಎಂದು ಪ್ರಾರ್ಥಿಸುತ್ತಾ ಪ್ರತಿಭಟನಾ ಸೂಚಕವಾಗಿ ಕಪ್ಪು ಪಟ್ಟಿ ಧರಿಸಿ ನಗರದ ಹಲವಾರು ಶಿವ ದೇವಾಲಯಗಳಲ್ಲಿ ಸುಮಾರು 50 ಮಂದಿ ಯೋಗ ಬಂಧುಗಳು ಪೂಜೆ, ಭಜನೆ ನಡೆಸಿದರು.
ತಮ್ಮ ತಪ್ಪುಗಳನ್ನು ತಿದ್ದಿಕೊಂಡು ಆಡಿರುವ ಮಾತುಗಳಿಗೆ ಕ್ಷಮೆ ಕೇಳಬೇಕೆಂದು ಈ ಸಂದರ್ಭದಲ್ಲಿ ಯೋಗ ಬಂಧುಗಳು ಒತ್ತಾಯಿಸಿದರು.