Home News ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಪುಟ್ಟಣ್ಣಯ್ಯ ಬಣ) ವತಿಯಿಂದ ಪ್ರತಿಭಟನೆ

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಪುಟ್ಟಣ್ಣಯ್ಯ ಬಣ) ವತಿಯಿಂದ ಪ್ರತಿಭಟನೆ

0

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ(ಪುಟ್ಟಣ್ಣಯ್ಯ ಬಣ) ಸೋಮವಾರ ನಗರದಲ್ಲಿ ಶಾಖಾ ಕಚೇರಿಯ ಉದ್ಘಾಟನೆ ಮತ್ತು ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದರು.
ಬಯಲುಸೀಮೆ ಜಿಲ್ಲೆಗಳಾದ ಚಿಕ್ಕಬಳ್ಳಾಪುರ ಮತ್ತು ಕೋಲಾರಕ್ಕೆ ಪರಮಶಿವಯ್ಯ ವರದಿಯ ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸಬೇಕು. ರೇಷ್ಮೆ ಬೆಳೆಯುವ ರೈತರಿಗೆ ಒಂದು ಕೆಜಿ ಗೂಡಿಗೆ ಕನಿಷ್ಠ 400 ರೂಗಳು ನಿಗದಿಪಡಿಸಬೇಕು. ಹಿಪ್ಪುನೇರಳೆ ತೋಟಕ್ಕೆ ಹನಿನೀರಾವರಿಗೆ ಮತ್ತು ಸಲಕರಣೆಗಳಿಗೆ ನಿಲ್ಲಿಸಿರುವ ಸಹಾಯಧನವನ್ನು ತಕ್ಷಣ ಬಿಡುಗಡೆ ಮಾಡಬೇಕು. ರೈತರಿಗೆ ಒಂದು ಲೀಟರ್ ಹಾಲಿಗೆ 40 ರೂಗಳಷ್ಟನ್ನು ಸರ್ಕಾರ ನಿಗದಿಗೊಳಿಸಬೇಕು. ರೈತರ ಪಂಪ್ಸೆಟ್ಗಳಿಗೆ ಮೀಟರ್ ಅಳವಡಿಸುವುದನ್ನು ಸರ್ಕಾರ ಕೈಬಿಟ್ಟು, 3 ಫೇಸ್ ವಿದ್ಯುತ್ ಕನಿಷ್ಠ 10 ಗಂಟೆ ಕೊಡಬೇಕು. ರೈತರು ಬೆಳೆಯುವ ತರಕಾರಿಗಳು ಮತ್ತು ಹೂಗಳಿಗೆ ಎ.ಪಿ.ಎಂ.ಸಿ ಮಾರುಕಟ್ಟೆ ಮಳಿಗೆಗಳಲ್ಲಿ ಪಡೆಯುವ ಶೇಕಡಾ 10 ರಷ್ಟು ಲಮಿಷನ್ ಹಾಗೂ ಬಿಳಿ ಚೀಟಿ ಕೊಡುವುದನ್ನು ನಿಲ್ಲಿಸಬೇಕು. ರಸೀದಿ ಕೊಡುವುದನ್ನು ಜಾರಿಗೊಳಿಸಬೇಕು ಮುಂತಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ನಗರದಲ್ಲಿ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿ ತಾಲ್ಲೂಕು ಕಚೇರಿಯ ಮುಂದೆ ಧರಣಿ ನಡೆಸಿದರು.
ಎಲ್ಲಾ ಬ್ಯಾಂಕುಗಳು ಗಣಕೀಕೃತಗೊಂಡಿವೆ. ಯಾರು ಎಲ್ಲಿ ಸಾಲ ಪಡೆದಿದ್ದಾರೆಂಬುದು ತಿಳಿದುಕೊಳ್ಳಬಹುದಾಗಿದ್ದರೂ ಎಲ್ಲಾ ಬ್ಯಾಂಕುಗಳಲ್ಲಿ ಎನ್.ಒ.ಸಿ ನೆಪದಲ್ಲಿ ರೈತರ ಶೋಷಣೆಯಾಗುತ್ತಿದೆ. ರೈತರ ಹಣ, ಸಮಯಕ್ಕೆ ಬೆಲೆಯಿಲ್ಲದಂತಾಗಿದೆ ಎಂದು ಈ ಸಂದರ್ಭದಲ್ಲಿ ಆರೋಪಿಸಿದರು. ಸರ್ಕಾರದ ವಿವಿಧ ಭಾಗ್ಯಗಳ ಭಿಕ್ಷೆ ಬೇಕಿಲ್ಲ. ನೀರು ಕೊಟ್ಟರೆ ಸಾಕು. ನಾಡು ಸುಭಿಕ್ಷ ವಾಗುತ್ತದೆ ಎಂದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ(ಪುಟ್ಟಣ್ಣಯ್ಯ ಬಣ) ಜಿಲ್ಲಾ ಸಮಿತಿಯ ಬಿ.ಕೆ.ಮುನಿಕೆಂಪಣ್ಣ, ಎಂ.ಆರ್.ಲಕ್ಷ್ಮೀನಾರಾಯಣ್, ನಾರಾಯಣಸ್ವಾಮಿ, ಶಂಕರರೆಡ್ಡಿ, ಅನಸೂಯಮ್ಮ, ಪಾರ್ವತಮ್ಮ, ತಾಲ್ಲೂಕು ಸಮಿತಿಯ ಪದಾಧಿಕಾರಿಗಳಾದ ಶಂಕರಪ್ಪ, ಎಸ್.ಎಂ.ರವಿಪ್ರಕಾಶ್, ನಾಗರಾಜ್, ಬಾಲಮುರಳಿಕೃಷ್ಣ, ಡಿ.ವಿ.ನಾರಾಯಣಸ್ವಾಮಿ, ರಾಮಮೂರ್ತಿ, ಸುರೇಶ್, ಬೈರಪ್ಪ, ನಾಗರಾಜು, ಕೃಷ್ಣಮೂರ್ತಿ, ಮುನೇಗೌಡ, ಪ್ರತೀಶ್, ನಾಗೇಶ್, ಮಲ್ಲೆಪ್ಪ, ಮುನಿಶಾಮಿಗೌಡ, ಚನ್ನೇಗೌಡ, ಕೇಶವ, ಚಂದ್ರಬಾಬು, ರಮೇಶ್, ಮುರಳಿ, ಮಂಜುನಾಥ್, ಬಚ್ಚರೆಡ್ಡಿ, ಸತೀಶ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

error: Content is protected !!