ಹಾಲಿನ ಗುಣಮಟ್ಟ, ಡಿಗ್ರಿಯ ನಿರ್ವಹಣೆ ಮತ್ತು ಹಾಲಿನ ಪೌಷ್ಟಿಕಾಂಶದ ಬಗ್ಗೆ ರೈತರು ತಿಳಿದಿರಲೇ ಬೇಕು ಎಂದು ರೈ ತಾಂತ್ರಿಕ ವಿಶ್ವವಿದ್ಯಾಲಯದ ವಿಷಯ ತಜ್ಞ ಡಾ.ಹೆಗಡೆ ತಿಳಿಸಿದರು.
ತಾಲ್ಲೂಕಿನ ಆನೂರು ಗ್ರಾಮದಲ್ಲಿ ರೈ ಟೆಕ್ನಾಲಜಿ ವಿಶ್ವವಿದ್ಯಾಲಯದಿಂದ ಆಯೋಜಿಸಿದ್ದ ಬಿ.ಎಸ್.ಸಿ ಎ.ಜಿ ನಾಲ್ಕನೆಯ ವರ್ಷದ ವಿದ್ಯಾರ್ಥಿಗಳ ಕಾರ್ಯಾನುಭವದ ಗ್ರಾಮೀಣ ಅಭಿವೃದ್ಧಿ ಉದ್ಯಮಶೀಲ ಜಾಗೃತಿ ಯೋಜನಾ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡವರು ಗುಣಮಟ್ಟದ ಹಾಲಿಗೆ ಬೆಲೆ ಸಿಗುವುದರಿಂದ ಮತ್ತು ಹಸುಗಳಿಗೆ ನೀಡುವ ಆಹಾರ ಕ್ರಮದ ಬಗ್ಗೆ, ಶುಚಿತ್ವದ ಕುರಿತಂತೆ ತಿಳಿದುಕೊಂಡಿರಬೇಕು ಎಂದು ಹೇಳಿ ತಾಂತ್ರಿಕ ವಿವರಗಳನ್ನು ಸರಳೀಕರಿಸಿ ವಿವರಿಸಿದರು.
ಮಣ್ಣು ಶಾಸ್ತ್ರ ವಿಭಾಗದ ಡಾ.ಚಿಕ್ಕರಾಜ, ಕೀಟ ಶಾಸ್ತ್ರ ವಿಭಾಗದ ಡಾ.ಶಿವರಾಮು, ಸಯ್ಯದ್ ರೆಹಮಾನ್, ರೇಷ್ಮೆ ಕೃಷಿಯ ಡಾ.ಬಿ.ಎಂ.ಪ್ರಕಾಶ್, ರೈತರಿಗೆ ಆಯಾ ಕ್ಷೇತ್ರದ ಕುರಿತಂತೆ ಮಾಹಿತಿಯನ್ನು ನೀಡಿದರು. ರೇಷ್ಮೆ, ಜೇನು ಕೃಷಿ, ಮಣ್ಣಿನ ಫಲವತ್ತತೆ ಮತ್ತು ನಿರ್ವಹಣೆ ಕುರಿತಂತೆ ರೈತರು ತಮ್ಮ ಸಂದೇಹಗಳನ್ನು ಪರಿಹರಿಸಿಕೊಂಡರು.
ಪ್ರಗತಿಪರ ರೈತ ಶ್ರೀನಿವಾಸ್, ಮಂಜುನಾಥ, ರಾಜಣ್ಣ, ವಿದ್ಯಾರ್ಥಿಗಳಾದ ವಿಷ್ಣು, ಭೂಪಾಲಗೌಡ, ಕಾರ್ತಿಕ್, ಸೂರ್ಯ, ಹರ್ಷಿತ, ಮಾಧವಿ, ಲತಾ, ಶೀಲ, ಶ್ರವಣ ಹಾಜರಿದ್ದರು.