Home News ವಕೀಲರು ಕಲಾಪದಿಂದ ಹೊರಗುಳಿದು ಬುಧವಾರ ಪ್ರತಿಭಟನೆ ನಡೆಸಿದರು

ವಕೀಲರು ಕಲಾಪದಿಂದ ಹೊರಗುಳಿದು ಬುಧವಾರ ಪ್ರತಿಭಟನೆ ನಡೆಸಿದರು

0

ಧಾರವಾಡದ ವಕೀಲರಾದ ಬಿ.ಐ.ದೊಡ್ಡಮನಿ ಅವರ ಮೇಲೆ ಹಲ್ಲೆ ನಡೆಸಿರುವ ಆರೋಪಿಗಳನ್ನು ಕೂಡಲೇ ಬಂದಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ವಕೀಲರ ಸಂಘದ ಪದಾಧಿಕಾರಿಗಳು ಕಲಾಪದಿಂದ ಹೊರಗುಳಿದು ಬುದವಾರ ಪ್ರತಿಭಟನೆ ನಡೆಸಿದರು.
ಈ ಬಗ್ಗೆ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ವಿ.ಚಂದ್ರಶೇಖರಗೌಡ ಮಾತನಾಡಿ ಇತ್ತೀಚೆಗೆ ವಕೀಲರ ಮೇಲೆ ನಿರಂತರವಾಗಿ ಹಲ್ಲೆ ನಡೆಯುತ್ತಿದ್ದು ಪೊಲೀಸರು ವಕೀಲರಿಗೆ ಸೂಕ್ತ ಭದ್ರತೆ ಒದಗಿಸಬೇಕು. ಕಳೆದ ಫೆ ೦೫ ರಂದು ದಾರವಾಡದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ವಕೀಲ ಬಿ.ಐ.ದೊಡ್ಡಮನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಆರೋಪಿಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದರು.

ಧಾರವಾಡದ ವಕೀಲರಾದ ಬಿ.ಐ.ದೊಡ್ಡಮನಿ ಅವರ ಮೇಲೆ ಹಲ್ಲೆ ನಡೆಸಿರುವ ಆರೋಪಿಗಳನ್ನು ಕೂಡಲೇ ಬಂದಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಹಿರಿಯ ವಕೀಲರಾದ ಡಿ.ಎ.ಅಶ್ವತ್ಥನಾರಾಯಣರವರ ಅಧ್ಯಕ್ಷತೆಯಲ್ಲಿ ಮತ್ತೊಂದು ಗುಂಪಿನ ವಕೀಲರು ಕಲಾಪದಿಂದ ಹೊರಗುಳಿದು ಬುಧವಾರ ಪ್ರತಿಭಟನೆ ನಡೆಸಿದರು.

ವಕೀಲರ ಸಂಘದ ಕಾರ್ಯದರ್ಶಿ ಎಂ.ಬಿ.ಲೋಕೇಶ್, ಎಸ್.ಎನ್.ಚಂದ್ರಶೇಖರ್, ಕೆ.ಎಂ.ಮಂಜುನಾಥ, ಸಿ.ಎಲ್.ವೆಂಕಟರೆಡ್ಡಿ, ನಾಗೇಂದ್ರಬಾಬು, ರಾಮಕೃಷ್ಣ, ವಿಶ್ವನಾಥಪ್ಪ, ಎನ್.ಎಂ.ಮಂಜುನಾಥ್, ನಾಗಮಣಿ ಶ್ರೀನಿವಾಸ್, ಮತ್ತಿತರರು ಹಾಜರಿದ್ದರು.
ನಗರದ ನ್ಯಾಯಾಲಯ ಆವರಣದಲ್ಲಿ ಬುಧವಾರ ವಕೀಲರ ಎರಡು ಗುಂಪುಗಳ ಸದಸ್ಯರು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸುವ ಮೂಲಕ ಬೂದಿ ಮುಚ್ಚಿದ ಕೆಂಡದಂತಿದ್ದ ತಾಲ್ಲೂಕಿನ ವಕೀಲರ ಸಂಘದಲ್ಲಿದ್ದ ಬಿನ್ನಮತ ಸ್ಪೋಟಗೊಂಡಿದೆ.
ಧಾರವಾಡದ ವಕೀಲ ಬಿ.ಐ.ದೊಡ್ಡಮನಿ ಅವರ ಮೇಲೆ ಹಲ್ಲೆ ನಡೆಸಿರುವ ಆರೋಪಿಗಳನ್ನು ಕೂಡಲೇ ಬಂದಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ತಾಲ್ಲೂಕು ವಕೀಲರ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಹೊರಟ ನಂತರ ಹಿರಿಯ ವಕೀಲರಾದ ಡಿ.ಎ.ಅಶ್ವತ್ಥನಾರಾಯಣರವರ ಅಧ್ಯಕ್ಷತೆಯಲ್ಲಿ ಮತ್ತೊಂದು ಗುಂಪಿನ ಸದಸ್ಯರು ನ್ಯಾಯಾಲಯ ಆವರಣದಲ್ಲಿ ಪ್ರತಿಭಟನೆ ನಡೆಸಿ ಕಲಾಪಕ್ಕೆ ಗೈರು ಹಾಜರಾದರು.
ಹಿರಿಯ ವಕೀಲರಾದ ಈ.ನಾರಾಯಣಪ್ಪ, ವಿ.ಸುಬ್ರಮಣ್ಯಪ್ಪ, ಯೋಗಾನಂದ್, ಡಿ.ಎ.ಸತ್ಯನಾರಾಯಣ, ಎನ್.ವೆಂಕಟೇಶ್, ಅಶೋಕ್, ಲಕ್ಷ್ಮಮ್ಮ, ಅಂಬರೀಶ್, ವೀರಕುಮಾರ್, ಬಸವನಪರ್ತಿ ನಾಗರಾಜ್ ಹಾಜರಿದ್ದರು.