ತಾಲ್ಲೂಕಿನ ವರದನಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮವನ್ನು ವಿಶೇಷವಾಗಿ ಆಚರಿಸಲಾಯಿತು.
ಧ್ವಜಾರೋಹಣನ್ನು ಗ್ರಾಮದ ಹಿರಿಯರಾದ ದ್ಯಾವಪ್ಪ ನೆರವೇರಿಸಿದರು. ಶಿಕ್ಷಕ ಎಚ್.ವಿ.ವೆಂಕಟರೆಡ್ಡಿ ಭಗತ್ಸಿಂಗ್ ಕುರಿತಂತೆ ಮಕ್ಕಳಿಗೆ ತಿಳಿಸಿದರು. ಏಳನೇ ತರಗತಿ, ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಯಲ್ಲಿ ಹೆಚ್ಚು ಅಂಕ ಗಳಿಸಿರುವ ಗ್ರಾಮದ ವಿದ್ಯಾರ್ಥಿಗಳಾದ ಎನ್.ಸುಶ್ಮಿತ, ವಿ.ಎಸ್.ಮಿಥುನ್ಕುಮಾರ್, ಕಿಶೋರ್, ಸುದೀಪ್, ವಿನುತ ಅವರನ್ನು ಪುರಸ್ಕರಿಸಲಾಯಿತು.

ಗ್ರಾಮದ ದೇವರಾಜು, ಅಮರನಾಥ್, ರಘುನಾಥ್, ಹನುಮಂತಯ್ಯ, ನಾಗರಾಜ್, ಮೂರ್ತಿ, ಶಿಕ್ಷಕರು ಹಾಜರಿದ್ದರು.