Home News ವಿಜಾಪುರದ ಗೋಲ ಗುಮ್ಮಟದ ಮುಂದೆ ತಾಲ್ಲೂಕು ಕಸಾಪ ವತಿಯಿಂದ ಸಾಧಕರಿಗೆ ಸನ್ಮಾನ

ವಿಜಾಪುರದ ಗೋಲ ಗುಮ್ಮಟದ ಮುಂದೆ ತಾಲ್ಲೂಕು ಕಸಾಪ ವತಿಯಿಂದ ಸಾಧಕರಿಗೆ ಸನ್ಮಾನ

0

ವಿಶ್ವದ ಎರಡನೆ ಅತಿ ದೊಡ್ಡ ಮಾನವನಿರ್ಮಿತ ಗುಂಬಜ್ ಎಂದೇ ಖ್ಯಾತಿ ಪಡೆದ ವಿಜಾಪುರದ ಗೋಲ ಗುಮ್ಮಟದೊಳದೊಳಗಿನ ಪ್ರಧಾನ ಕೊಠಡಿಯಲ್ಲಿ ಪ್ರತಿ ಶಬ್ದವೂ ಏಳು ಬಾರಿ ಪ್ರತಿಧ್ವನಿತವಾಗುತ್ತದೆ. ಕನ್ನಡ ಸಾಹಿತ್ಯ ಸಂಸ್ಕೃತಿಯೂ ಇದೇ ರೀತಿ ಎಲ್ಲಾ ದಿಕ್ಕುಗಳಲ್ಲೂ ಪ್ರತಿಧ್ವನಿಸಲಿ ಎಂದು ಕಸಾಪ ಅಧ್ಯಕ್ಷ ಎ.ಎಂ.ತ್ಯಾಗರಾಜ್ ತಿಳಿಸಿದರು.
ತಾಲ್ಲೂಕು ಕಸಾಪ ವತಿಯಿಂದ “ಕಸಾಪ ನಡಿಗೆ ಐತಿಹಾಸಿಕ ಸ್ಮಾರಕದೆಡೆಗೆ” ಕಾರ್ಯಕ್ರಮದಡಿಯಲ್ಲಿ ವಿಜಾಪುರದ ಗೋಲ ಗುಮ್ಮಟದ ಮುಂದೆ ಸಾಧಕರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಗೋಲ ಗುಮ್ಮಟದಲ್ಲಿನ “ಪಿಸುಗುಟ್ಟುವ ಶಾಲೆ”ಯಲ್ಲಿ ಅತಿ ಸಣ್ಣ ಶಬ್ದವೂ ೩೭ ಮಿ ದೂರದಲ್ಲಿ ಸ್ಪಷ್ಟವಾಗಿ ಕೇಳಿಬರುತ್ತದೆ. ಹಾಗೆಯೇ ಕನ್ನಡವೂ ಸಹ ದಶದಿಕ್ಕುಗಳಿಗೂ ಪಸರಿಸುವಂತಾಗಲಿ. ಕಸಾಪ ಕೇವಲ ಒಂದು ಪ್ರದೇಶಕ್ಕೆ ಸೀಮಿತವಲ್ಲ. ಕರ್ನಾಟಕದ ಐತಿಹಾಸಿಕ ಪರಂಪರೆಯ ಪ್ರತಿನಿಧಿಗಳಾದ ಸ್ಮಾರಕಗಳ ಬಳಿ ತೆರಳಿ ನಾಡಬಾವುಟವನ್ನು ಹಾರಿಸುವುದು, ಸ್ಥಳೀಯ ಸಾಧಕರನ್ನು ಸನ್ಮಾನಿಸುವುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಾನಪದ ಕಲಾವಿದರಾದ ರಾಜಗೆರೆ ಎಸ್.ಶಿವಣ್ಣ, ಸಾಹಿತಿ ಹಾಗೂ ಶಿಕ್ಷಕಿ ಭಾರತಿ ಪಂಡಿತ ಮದಿನವರ, ಜಮಖಂಡಿ ಕನ್ನಡ ಜಾನಪದ ಪರಿಷತ್ತು ಸಂಘಟನಾ ಕಾರ್ಯದರ್ಶಿ ಶಂಕರನಿಂಗಪ್ಪ ಕಂಕಣವಾಡೆ ಅವರನ್ನು ಶಿಡ್ಲಘಟ್ಟ ಕಸಾಪ ವತಿಯಿಂದ ಸನ್ಮಾನಿಸಲಾಯಿತು.
ಜಮಖಂಡಿ ಕನ್ನಡ ಜಾನಪದ ಪರಿಷತ್ತು ಅಧ್ಯಕ್ಷ ಪಿ.ಎಸ್.ಕಟ್ಟೀಮನಿ ಹಾಜರಿದ್ದರು.

error: Content is protected !!