Home News ವಿವಿಧ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ

ವಿವಿಧ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ

0

ಶಿಡ್ಲಘಟ್ಟ ತಾಲ್ಲೂಕಿನ ಗಂಜಿಗುಂಟೆ ಗ್ರಾಮದಲ್ಲಿ ಜಿಲ್ಲಾ ಪಂಚಾಯತಿ ಸ್ಥಾನಕ್ಕೆ ಸ್ಪರ್ಧಿಸಿರುವ ಸಿಪಿಐಎಂ ಅಭ್ಯರ್ಥಿ ಸದಾನಂದ ಮತಯಾಚಿಸಿದರು. ಕುಂದಲಗುರ್ಕಿ ಮುನೀಂದ್ರ, ವೆಂಕಟೇಶ್, ಖಲೀಲ್, ನವೀನ್, ಬಾಬು, ಮಂಜುನಾಥ್ ಹಾಜರಿದ್ದರು.

ಚೀಮಂಗಲದಲ್ಲಿ ಚುನಾವಣೆ ಪ್ರಚಾರ
ಚೀಮಂಗಲದಲ್ಲಿ ಚುನಾವಣೆ ಪ್ರಚಾರ

ಶಿಡ್ಲಘಟ್ಟ ತಾಲ್ಲೂಕಿನ ಚೀಮಂಗಲ ಜಿಲ್ಲಾ ಪಂಚಾಯತಿ ಸ್ಥಾನಕ್ಕೆ ಸ್ಪರ್ಧಿಸಿರುವ ಜೆಡಿಎಸ್ ಪಕ್ಷದ ತನುಜ ರಘು ಮತಯಾಚಿಸಿದರು. ಭಕ್ತರಹಳ್ಳಿ ಗೋಪಾಲ ಗೌಡ, ವೆಂಕಟೇಶ, ಚನ್ನೇಗೌಡ, ಕೇಶವ ಮೂರ್ತಿ, ಮುನಿರಾಜು,ನಾರಾಯಣಸ್ವಾಮಿ, ಮುರಳಿ, ಆಂಜಿನಪ್ಪ, ದೇವರಾಜು ಹಾಜರಿದ್ದರು.
ಭಕ್ತರಹಳ್ಳಿ ಗ್ರಾಮದಲ್ಲಿ ಚುನಾವಣೆ ಪ್ರಚಾರ

 
ಶಿಡ್ಲಘಟ್ಟ ತಾಲ್ಲೂಕಿನ ಭಕ್ತರಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡರು ಜಿಲ್ಲಾ ಪಂಚಾಯತಿ ಅಭ್ಯರ್ಥಿ ನಿರ್ಮಲ ಮುನಿರಾಜು ಮತ್ತು ತಾಲ್ಲೂಕು ಪಂಚಾಯತಿ ಅಭ್ಯರ್ಥಿ ಕವಿತಾ ಚಿದಾನಂದಮೂರ್ತಿ ಅವರ ಪರವಾಗಿ ಮತಯಾಚಿಸಿದರು. ಬಿ.ವಿ.ಮುನೇಗೌಡ, ಎಂ.ವೆಂಕಟಮೂರ್ತಿ, ಎಸ್.ನಾರಾಯಣಸ್ವಾಮಿ, ಬಿ.ವಿ.ಕೃಷ್ಣಪ್ಪ, ಬಿ.ಕೆ.ಮುನಿರಾಜು, ರಾಮಮೂರ್ತಿ, ರಾಮಚಂದ್ರಪ್ಪ, ಪುಟ್ಟಮೂರ್ತಿ ಹಾಜರಿದ್ದರು.
ಪಲಿಚೆರ್ಲು ಗ್ರಾಮ ಚುನಾವಣೆ ಪ್ರಚಾರ

 
ಶಿಡ್ಲಘಟ್ಟ ತಾಲ್ಲೂಕಿನ ಪಲಿಚೆರ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತರಬಹಳ್ಳಿ ಗ್ರಾಮದಲ್ಲಿ ಗಂಜಿಗುಂಟೆ ಜಿಲ್ಲಾ ಪಂಚಾಯತಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಾ.ಜಯರಾಮರೆಡ್ಡಿ ಮತಯಾಚಿಸಿದರು. ಪಲಿಚೇರ್ಲು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಟಿ.ಎಂ.ದೇವರಾಜು, ಸದಸ್ಯ ಮುನಿಯಪ್ಪ, ಸೋಮಶೇಖರ್, ಪ್ರಭು ಹಾಜರಿದ್ದರು.
ಜಂಗಮಕೋಟೆಯಲ್ಲಿ ಚುನಾವಣೆ ಪ್ರಚಾರ

ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಜಿಲ್ಲಾ ಪಂಚಾಯತಿ ಹಾಗೂ ತಾಲ್ಲೂಕು ಪಂಚಾಯತಿ ಕ್ಷೇತ್ರದಲ್ಲಿ ಶಾಸಕ ಎಂ.ರಾಜಣ್ಣ ಚುನಾವಣೆ ಪ್ರಚಾರ ನಡೆಸಿದರು. ಜಂಗಮಕೋಟ ಜಿಲ್ಲಾ ಪಂಚಾಯತಿ ಅಭ್ಯರ್ಥಿ ನಳಿನಾ ಮಂಜುನಾಥ್, ತಾಲ್ಲೂಕು ಪಂಚಾಯತಿ ಅಭ್ಯರ್ಥಿ ಜೆ.ಎಂ.ವೆಂಕಟೇಶ್, ಗ್ರಾಮ ಪಂಚಾಯತಿ ಅಧ್ಯಕ್ಷೆ ರೆಹಮತ್ಜಾನ್, ಮಾಜಿ ಅಧ್ಯಕ್ಷ ನಜೀರ್ಸಾಬ್, ಮುಖಂಡರಾದ ಚಂದ್ರೇಗೌಡ, ಮುನಾವರ್, ನಂಜೇಗೌಡ ಹಾಜರಿದ್ದರು.
ಶಿಡ್ಲಘಟ್ಟ ತಾಲ್ಲೂಕಿನ ಚೀಮಂಗಲ ಜಿಲ್ಲಾ ಪಂಚಾಯತಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೀತಾ ಶಂಕರ್ ಹಾಗೂ ತಾಲ್ಲೂಕು ಪಂಚಾಯತಿ ಅಭ್ಯರ್ಥಿ ಅರಿಕೆರೆ ಜಿ.ಮುನಿರಾಜು ಪರ ಬಿಜೆಪಿ ತಾಲ್ಲೂಕು ಅಧ್ಯಕ್ಷ ಕಂಬದಹಳ್ಳಿ ಸುರೇಂದ್ರಗೌಡ ಮತಯಾಚಿಸಿದರು. ಶಂಕರ್ ಹಾಜರಿದ್ದರು.

error: Content is protected !!