Home News ಶ್ರೀಚನ್ನಕೇಶವಸ್ವಾಮಿ ಪ್ರಾಣ ಪ್ರತಿಷ್ಠಾಪನೆ

ಶ್ರೀಚನ್ನಕೇಶವಸ್ವಾಮಿ ಪ್ರಾಣ ಪ್ರತಿಷ್ಠಾಪನೆ

0

ಆಗಸ್ಟ್ ೬ ಮತ್ತು ೭ ರಂದು ತಾಲ್ಲೂಕಿನ ಕೊತ್ತನೂರು ಗ್ರಾಮದ ಶ್ರೀದೇವಿ ಭೂದೇವಿ ಸಹಿತ ಶ್ರೀಚನ್ನಕೇಶವಸ್ವಾಮಿ ದೇವಾಲಯದ ನೂತನ ಚಿರಬಿಂಬ ಪ್ರಾಣ ಪ್ರತಿಷ್ಠಾಪನೆ ಮತ್ತು ತಿರುಕಲ್ಯಾಣ ಮಹೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಆಗಸ್ಟ್ ೬ ರ ಸಂಜೆ ೫ ಗಂಟೆಗೆ ಮಂಗಳವಾದ್ಯ, ವೇದಘೋಷ ಸಹಿತ ಯಾಗಶಾಲ ಪ್ರವೇಶ, ಪುಣ್ಯಾಹ ವಾಚನ, ರಕ್ಷಾಬಂಧನ, ಕಳಸಾರಾಧನೆ, ಮಹಾಮಂಗಳಾರತಿ ಏರ್ಪಡಿಸಲಾಗಿದೆ.
ಆಗಸ್ಟ್ ೭ ರ ಬೆಳಗ್ಗೆ ೬ ಗಂಟೆಗೆ ಸುಪ್ರಭಾತ ಸೇವೆ, ವೇದಸ್ತೂತ್ರ ದಿವ್ಯಪ್ರಬಂಧ ಪಾರಾಯಣ, ಕಳಸಾರಾಧನೆ, ಪ್ರಧಾನಹೋಮ, ಪ್ರಾಣಪ್ರತಿಷ್ಠೆ ಹೋಮ, ವಿಶೇಷ ಶ್ರೀ ಸುದರ್ಶನ ನಾರಸಿಂಹ ಹೋಮ, ತಿರುಕಲ್ಯಾಣ ಮಹೋತ್ಸವ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ.
ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ದೇವಾಲಯದ ಪ್ರಧಾನ ಅರ್ಚಕ ಚನ್ನಕೇಶವಾಚಾರ್ ಕೋರಿದ್ದಾರೆ.

error: Content is protected !!