Home News ಸಂತ್ರಸ್ಥರ ನೋವಿಗೆ ಸ್ಪಂದಿಸಿದ ಶಿಡ್ಲಘಟ್ಟ ತಾಲ್ಲೂಕಿನ ಜನತೆ

ಸಂತ್ರಸ್ಥರ ನೋವಿಗೆ ಸ್ಪಂದಿಸಿದ ಶಿಡ್ಲಘಟ್ಟ ತಾಲ್ಲೂಕಿನ ಜನತೆ

0

ಭಾರಿ ಮಳೆಯಿಂದ ತತ್ತರಗೊಂಡಿರುವ ಕೊಡಗು ಮತ್ತು ಕೇರಳದ ಜನರ ಸಂಕಷ್ಟಕ್ಕೆ ಶಿಡ್ಲಘಟ್ಟ ತಾಲ್ಲೂಕಿನ ಜನತೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ. ವಿವಿಧ ಗ್ರಾಮಗಳಲ್ಲಿ ಯುವ ಸಂಘಟನೆಗಳು, ಟ್ರಸ್ಟ್‌ಗಳು ಹಾಗೂ ಶಿಕ್ಷಣ ಸಂಸ್ಥೆಗಳಿಂದ ಹಣ, ಆಹಾರ, ಬಟ್ಟೆ ಹಾಗೂ ಅಗತ್ಯ ವಸ್ತುಗಳನ್ನ ಸಂಗ್ರಹಿಸಿ ಸಂಬಂಧಿಸಿದವರಿಗೆ ತಲುಪಿಸುವ ಕಾರ್ಯ ಭರದಿಂದ ಸಾಗಿದೆ.
ಕೊಡಗು ಮತ್ತು ಕೇರಳ ಪ್ರವಾಹದ ಪರಿಹಾರಕ್ಕಾಗಿ ಶಿಡ್ಲಘಟ್ಟದ ಶ್ರೀ ಶಾರದ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ನಗರದೆಲ್ಲೆಡೆ ಸಂಚರಿಸಿ ನೆರೆ ಸಂತ್ರಸ್ಥರಿಗೆ ಹಣವನ್ನು ಸಂಗ್ರಹಿಸಿದರು. ತಾಲ್ಲೂಕಿನ ಹಿತ್ತಲಹಳ್ಳಿಯಲ್ಲಿ ಯುವಕರು ಗ್ರಾಮದಲ್ಲಿ ಹಣವನ್ನು ಸಂಗ್ರಹಿಸಿದರು. ಸುಗಟೂರು ಗ್ರಾಮದ ಯುವಕರು ಅಗತ್ಯ ವಸ್ತುಗಳನ್ನು ಗ್ರಾಮದಲ್ಲಿ ಸಂಗ್ರಹಿಸಿದರು.
‘ಶ್ರೀ ಎಚ್‌.ಡಿ.ದೇವೇಗೌಡ ರವರ ಮತ್ತು ಶ್ರೀ ಜಯಪ್ರಕಾಶ್‌ ನಾರಾಯಣ್‌ ರವರ ಸೇವಾಭಿವೃದ್ಧಿ ಚಾರಿಟಬಲ್‌ ಟ್ರಸ್ಟ್‌’ ಮತ್ತು ನಾಗಮಂಗಲ ಗ್ರಾಮ ಪಂಚಾಯಿತಿ ವತಿಯಿಂದ ಕ್ಯಾಂಟರ್‌ ತುಂಬ ಅಗತ್ಯ ವಸ್ತುಗಳನ್ನು ಕಳುಹಿಸಿಕೊಡಲಾಯಿತು.
ಶಿಡ್ಲಘಟ್ಟ ಡಾಟ್‌ ಕಾಮ್‌ ವತಿಯಿಂದ ಫೇಸ್‌ ಬುಕ್‌ ಮತ್ತು ವ್ಯಾಟ್ಸಪ್‌ ಮೂಲಕ ಸಂದೇಶ ರವಾನಿಸಿ ದಾನಿಗಳಿಂದ ಹಣ ಪಡೆದು ತಹಶೀಲ್ದಾರ್‌ ಎಸ್.ಅಜಿತ್ ಕುಮಾರ್ ರೈ ಅವರಿಗೆ ನೀಡಲಾಯಿತು.
ಶ್ರೀಸರಸ್ವತಿ ಕಾನ್ವೆಂಟ್‌ನ ಶಿಕ್ಷಕಿ ಬಿ.ಮಂಜುಳ ಹಾಗೂ ಸತ್ಯನಾರಾಯಣರಾವ್ ದಂಪತಿಗಳು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ೨೦ ಸಾವಿರ ರೂಪಾಯಿಗಳ ಚೆಕ್‌ನ್ನು ತಹಸೀಲ್ದಾರ್ ಎಸ್.ಅಜಿತ್ ಕುಮಾರ್ ರೈ ಅವರಿಗೆ ನೀಡಿದ್ದಾರೆ.
ಟಿಪ್ಪು ಸೆಕ್ಯುಲರ್‌ ಸೇನಾ ಅಧ್ಯಕ್ಷ ಎಂ.ಮೌಲಾ ನೇತೃತ್ವದಲ್ಲಿ 14,630 ರೂ ಹಾಗೂ ನಿವೃತ್ತ ಸರ್ಕಾರಿ ನೌಕರರ ಸಂಘದ ಸದಸ್ಯರು 5 ಸಾವಿರ ರೂಗಳ ಮೊತ್ತದ ಚೆಕ್‌ಅನ್ನು ತಹಶೀಲ್ದಾರರಿಗೆ ನೀಡಿದರು.
ಹಿತ್ತಲಹಳ್ಳಿ ಯುವಕರ ನೇತೃತ್ವದಲ್ಲಿ ಗ್ರಾಮದಲ್ಲಿ ಸಂಗ್ರಹಿಸಿದ ಹಣದ ಮೊತ್ತ 25 ಸಾವಿರ ರೂಗಳನ್ನು ಚೆಕ್‌ ಮೂಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಹಶೀಲ್ದಾರ್‌ ಅಜಿತ್‌ ಕುಮಾರ್‌ ರೈ ಅವರ ಮೂಲಕ ಸಲ್ಲಿಸಲಾಯಿತು.

error: Content is protected !!