ಭಾರಿ ಮಳೆಯಿಂದ ತತ್ತರಗೊಂಡಿರುವ ಕೊಡಗು ಮತ್ತು ಕೇರಳದ ಜನರ ಸಂಕಷ್ಟಕ್ಕೆ ಶಿಡ್ಲಘಟ್ಟ ತಾಲ್ಲೂಕಿನ ಜನತೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ. ವಿವಿಧ ಗ್ರಾಮಗಳಲ್ಲಿ ಯುವ ಸಂಘಟನೆಗಳು, ಟ್ರಸ್ಟ್ಗಳು ಹಾಗೂ ಶಿಕ್ಷಣ ಸಂಸ್ಥೆಗಳಿಂದ ಹಣ, ಆಹಾರ, ಬಟ್ಟೆ ಹಾಗೂ ಅಗತ್ಯ ವಸ್ತುಗಳನ್ನ ಸಂಗ್ರಹಿಸಿ ಸಂಬಂಧಿಸಿದವರಿಗೆ ತಲುಪಿಸುವ ಕಾರ್ಯ ಭರದಿಂದ ಸಾಗಿದೆ.

ಶ್ರೀಸರಸ್ವತಿ ಕಾನ್ವೆಂಟ್ನ ಶಿಕ್ಷಕಿ ಬಿ.ಮಂಜುಳ ಹಾಗೂ ಸತ್ಯನಾರಾಯಣರಾವ್ ದಂಪತಿಗಳು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ೨೦ ಸಾವಿರ ರೂಪಾಯಿಗಳ ಚೆಕ್ನ್ನು ತಹಸೀಲ್ದಾರ್ ಎಸ್.ಅಜಿತ್ ಕುಮಾರ್ ರೈ ಅವರಿಗೆ ನೀಡಿದ್ದಾರೆ.
ಟಿಪ್ಪು ಸೆಕ್ಯುಲರ್ ಸೇನಾ ಅಧ್ಯಕ್ಷ ಎಂ.ಮೌಲಾ ನೇತೃತ್ವದಲ್ಲಿ 14,630 ರೂ ಹಾಗೂ ನಿವೃತ್ತ ಸರ್ಕಾರಿ ನೌಕರರ ಸಂಘದ ಸದಸ್ಯರು 5 ಸಾವಿರ ರೂಗಳ ಮೊತ್ತದ ಚೆಕ್ಅನ್ನು ತಹಶೀಲ್ದಾರರಿಗೆ ನೀಡಿದರು.