Home News ಸಮಾಜಕ್ಕೆ ನಾವು ಸದಾ ಋಣಿಗಳಾಗಿರಬೇಕು

ಸಮಾಜಕ್ಕೆ ನಾವು ಸದಾ ಋಣಿಗಳಾಗಿರಬೇಕು

0

ನಮ್ಮನ್ನು ಪೊರೆಯುವ ಸಮಾಜಕ್ಕೆ ನಾವು ಸದಾ ಋಣಿಗಳಾಗಿರಬೇಕು. ನಮ್ಮ ಪರಿಸರಕ್ಕೆ ಹಸಿರಿನ ಕಾಣಿಕೆ, ಶುದ್ಧ, ಸ್ವಚ್ಛ, ನೈರ್ಮಲ್ಯದ ಪರಿಸರವನ್ನು ರೂಪಿಸುವ ಸಂಕಲ್ಪ ಮಾಡಬೇಕು ಎಂದು ಎಸ್‌.ಎನ್‌.ಕ್ರಿಯಾ ಟ್ರಸ್ಟ್‌ ಅಧ್ಯಕ್ಷ ಆಂಜಿನಪ್ಪ ತಿಳಿಸಿದರು.
ತಾಲ್ಲೂಕಿನ ವರದನಾಯಕನಹಳ್ಳಿ ಗೇಟ್‌ನಲ್ಲಿರುವ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಎಸ್‌.ಎನ್‌.ಕ್ರಿಯಾ ಟ್ರಸ್ಟ್‌ ವತಿಯಿಂದ ಹಮ್ಮಿಕೊಂಡಿದ್ದ ಸಾಧಕರಿಗೆ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿರುವ ತಾಲ್ಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ತಾಲ್ಲೂಕಿನ ಹಲವು ಸಾಧಕರನ್ನು ಗೌರವಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವುದರೊಂದಿಗೆ ಇತರ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವುದು ಹಾಗೂ ಎಲೆ ಮರೆಯ ಕಾಯಿಗಳಂತೆ ವಿವಿಧ ಕ್ಷೇತ್ರಗಳಲ್ಲಿ ಯಾವುದೇ ಫಲಾಪೇಕ್ಷೆಯಿಲ್ಲದೆ ತೊಡಗಿಸಿಕೊಂಡಿರುವ ಸಾಧಕರನ್ನು ಸನ್ಮಾನಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ.

ಶಿಡ್ಲಘಟ್ಟ ತಾಲ್ಲೂಕಿನ ವರದನಾಯಕನಹಳ್ಳಿ ಗೇಟ್‌ನಲ್ಲಿರುವ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಎಸ್‌.ಎನ್‌.ಕ್ರಿಯಾ ಟ್ರಸ್ಟ್‌ ವತಿಯಿಂದ ಹಮ್ಮಿಕೊಂಡಿದ್ದ ಸಾಧಕರಿಗೆ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ವೀರಗಾಸೆ ಕಲಾವಿದ ಕೊತ್ತನೂರು ಗಂಗಾಧರ್‌ ನಾಲಿಗೆಯ ಮೇಲೆ ಕರ್ಪೂರವನ್ನು ಹಚ್ಚಿಕೊಂಡು ಜನರನ್ನು ಬೆರಗುಗೊಳಿಸಿದರು.

ಈಗಿನ ವಿದ್ಯಾರ್ಥಿಗಳೇ ಮುಂದಿನ ಭವಿಷ್ಯದ ರೂವಾರಿಗಳು. ಪ್ರತಿಯೊಬ್ಬರಲ್ಲೂ ಒಂದೊಂದು ಶಕ್ತಿಯಿರುತ್ತದೆ, ಆಸಕ್ತಿಯಿರುತ್ತದೆ. ತಮ್ಮ ಶಕ್ತಿಯನ್ನು ಗುರುತಿಸಿಕೊಂಡು ಸಾಧನೆ ಮಾಡಬೇಕು. ಸಮಾಜಕ್ಕೆ ಏನಾದರೂ ಹಿಂದಿರುಗಿಸುವ ಕೆಲಸವನ್ನೂ ಸಹ ಮಾಡಬೇಕು. ಪ್ರತಿಯೊಬ್ಬರ ಬೆಳವಣಿಗೆಯಲ್ಲೂ ಪೋಷಕರು, ಶಿಕ್ಷಕರು, ಸ್ನೇಹಿತರು ಮುಂತಾದವರ ಕಾಣಿಕೆಯಿರುತ್ತದೆ. ಬೆಳೆಯುವ ಹಾದಿಯನ್ನು ಮರೆಯಬಾರದು, ಇತರರಿಗೆ ಸಹಾಯ ಮಾಡುವ ಮನೋಭಾವವನ್ನು ಬಿಡಬಾರದು ಎಂದು ಹೇಳಿದರು.
ಶಿಡ್ಲಘಟ್ಟ ತಾಲ್ಲೂಕಿನ ವರದನಾಯಕನಹಳ್ಳಿ ಗೇಟ್‌ನಲ್ಲಿರುವ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಎಸ್‌.ಎನ್‌.ಕ್ರಿಯಾ ಟ್ರಸ್ಟ್‌ ವತಿಯಿಂದ ಹಮ್ಮಿಕೊಂಡಿದ್ದ ಸಾಧಕರಿಗೆ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಕಲಾವಿದೆಯರಾದ ಸಿಂಧು ಆಚಾರ್‌ ಮತ್ತು ತೇಜಸ್ವಿನಿ ಮುರಳೀಧರನ್‌ ಭರತನಾಟ್ಯ ನೃತ್ಯವನ್ನು ಪ್ರದರ್ಶಿಸಿದರು.

ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿರುವ ತಾಲ್ಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಕಲಾವಿದೆಯರಾದ ಸಿಂಧು ಆಚಾರ್‌ ಮತ್ತು ತೇಜಸ್ವಿನಿ ಮುರಳೀಧರನ್‌ ಭರತನಾಟ್ಯ ನೃತ್ಯವನ್ನು, ನಗರದ ಲಿಟಲ್‌ ಸ್ಟಾರ್‌ ಜ್ಯೂನಿಯರ್‌ ಕಲಾವಿದರು ನೃತ್ಯವನ್ನು, ಯೋಗಪಟುಗಳು ಯೋಗಗುಚ್ಚವನ್ನು, ಕೊತ್ತನೂರು ಗಂಗಾಧರ್‌ ವೀರಗಾಸೆ ಕಲೆಯನ್ನು ಪ್ರದರ್ಶಿಸಿದರು.
ಶಾಶ್ವತ ನೀರಾವರಿ ಹೋರಾಟಗಾರ ಮಳ್ಳೂರು ಹರೀಶ್‌, ವೀರಗಾಸೆ ಕಲಾವಿದ ಕೊತ್ತನೂರು ಗಂಗಾಧರ್‌, ರಕ್ತದಾನಿ ಟಿ.ಟಿ.ನರಸಿಂಹಪ್ಪ, ಕ್ರೀಡಾಪಟು ನಾರಾಯಣಸ್ವಾಮಿ, ನಾಟಿ ಔಷಧಿ ತಜ್ಞ ತಲಕಾಯಲಬೆಟ್ಟ ನಾರಾಯಣಸ್ವಾಮಿ, ಮಾಜಿ ಸೈನಿಕ ಎಸ್‌.ವಿ.ಐಯ್ಯರ್‌, ಹರಿಕಥೆ ಕಲಾವಿದ ತಿಪ್ಪೇನಹಳ್ಳಿ ರಾಘವೇಂದ್ರ, ಕಲಾವಿದ ದೇವರಮಳ್ಳೂರು ಎ.ವೆಂಕೋಬರಾವ್‌, ವನ್ಯಜೀವಿ ಛಾಯಾಗ್ರಾಹಕ ಡಿ.ಜಿ.ಮಲ್ಲಿಕಾರ್ಜುನ, ಸಮಾಜ ಸೇವಕಿ ನಾಗಮ್ಮ, ಹಿತ್ತಲಹಳ್ಳಿ ನರಸಿಂಹಪ್ಪ, ಹಿತ್ತಲಹಳ್ಳಿ ಕೃಷ್ಣಪ್ಪ, ಮುನಿಕೃಷ್ಣಪ್ಪ, ಅಜೀಜ್‌ಸಾಬ್‌, ಕುಸ್ತಿಪಟು ಮಹಮ್ಮದ್‌, ಬೀದಿ ವ್ಯಾಪಾರಿ ಪಾರ್ವತಮ್ಮ, ಧನಂಜಯ ಅವರನ್ನು ಗೌರವಿಸಲಾಯಿತು.
ಆನೂರು ದೇವರಾಜ್‌, ತಾದೂರು ಮಂಜುನಾಥ್‌, ರವಿಪ್ರಕಾಶ್‌, ಹಿತ್ತಲಹಳ್ಳಿ ಸುರೇಶ್‌, ಮಳಮಾಚನಹಳ್ಳಿ ಬೈರೇಗೌಡ, ದಡಂಘಟ್ಟ ಅಶ್ವತ್ಥನಾರಾಯಣರೆಡ್ಡಿ, ದಾನೇಗೌಡ, ಮೌಲಾ, ಅಫ್ಸರ್‌, ಮಂಜುನಾಥ್‌, ನಟರಾಜ್‌, ವಿಶ್ವನಾಥ್‌ ಕಾರ್ಯಕ್ರಮದಲ್ಲಿ ಹಾಜರಿದ್ದರು.