ಸರ್ಕಾರಿ ಶಾಲೆಗಳಲ್ಲಿ ಸಮುದಾಯದ ಸಹಕಾರದೊಂದಿಗೆ ಸೌಕರ್ಯಗಳನ್ನು ಹೆಚ್ಚಿಸಿಕೊಳ್ಳುವ ಮೂಲಕ ಮಕ್ಕಳ ಪ್ರತಿಭೆಯ ಬೆಳವಣಿಗೆಗೆ ಶಿಕ್ಷಕರು ನೆರವಾಗಬೇಕು ಎಂದು ಕೋಡಿಯಾಕ್ ಇನ್ಫೋಟೆಕ್ ಸಂಸ್ಥೆಯ ಸಂತೋಷ್ ತಿಳಿಸಿದರು.
ತಾಲ್ಲೂಕಿನ ಗಾಂಡ್ಲಚಿಂತೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದರಿಂದ 8ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಇನ್ಫೋಟೆಕ್ ಸಂಸ್ಥೆಯ ವತಿಯಿಂದ ವಿವಿಧ ರೀತಿಯ ಪುಸ್ತಕಗಳು, ಲೇಖನ ಸಾಮಗ್ರಿ, ಕೈಚೀಲ ಮುಂತಾದವುಗಳನ್ನು ಸೋಮವಾರ ವಿತರಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ಮಕ್ಕಳು ಹೆಚ್ಚು ಕ್ರಿಯಾಶೀಲರು ಮತ್ತು ಪ್ರತಿಭಾನ್ವಿವಿತರು ಆಗಿರುತ್ತಾರೆ. ಆದರೆ ಅವರನ್ನು ನೈಪುಣ್ಯತೆ ಮತ್ತು ಕುಶಲತೆಗಳೊಂದಿಗೆ ಪಠ್ಯೇತರ ಚಟುವಟಿಕೆಗಳ ಮೂಲಕ ಬೆಳೆಸಿದರೆ ಉನ್ನತ ಸಾಧನೆಗಳನ್ನು ಮಾಡುವರು. ತಾಲ್ಲೂಕಿಗೆ ಹೆಸರನ್ನು ತರುವರು ಎಂದರು.
ಮುಖ್ಯ ಶಿಕ್ಷಕ ವೆಂಕಟರೆಡ್ಡಿ, ಶಿಕ್ಷಕರಾದ ಎಂ.ಮಂಜುನಾಥ, ಪಿ.ವಿ.ರಾಮರೆಡ್ಡಿ, ಲಲಿತ, ಮಂಜುಳ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.