ಶಿಡ್ಲಘಟ್ಟದಿಂದ ಚಿಕ್ಕಬಳ್ಳಾಪುರ ಮತ್ತು ಶಿಡ್ಲಘಟ್ಟದಿಂದ ಚಿಂತಾಮಣಿ ರಸ್ತೆಗಳ ಬದಿಯಲ್ಲಿ ಹಲವಾರು ಅತ್ತಿ, ಗೋಣಿ, ಆಲ, ನೇರಳೆ ಮುಂತಾದ ಮರಗಳು ರಸ್ತೆ ಅಗಲೀಕರಣಕ್ಕಾಗಿ ಬಲಿಯಾಗುತ್ತಿರುವುದರಿಂದ, ಇನ್ನೂ ಕಡಿಯದೆ ಉಳಿದ ಗೋಣಿ ಮರವೊಂದರಲ್ಲಿ ಹಣ್ಣು ತಿನ್ನುತ್ತಿರುವ ಸೊಪ್ಪುಗುಟುರ ಹಕ್ಕಿ ಮುಂದಿನ ದಿನಗಳಲ್ಲಿ ನಮ್ಮ ಭಾಗದಲ್ಲಿ ವಿರಳವಾಗಬಹುದು.