ಹಿಂದು ಮುಸ್ಲಿಂ ಮತ್ತು ಕ್ರೈಸ್ತ ಧರ್ಮಗುರುಗಳ ಸಮ್ಮುಖದಲ್ಲಿ ಭಾನುವಾರ ಸಂಜೆ ನಗರದಲ್ಲಿ ಇಫ್ತಿಯಾರ್ ಕೂಟವನ್ನು ಆಯೋಜಿಸಿ ಧರ್ಮ ಸಮನ್ವಯತೆಯನ್ನು ಸಾರಲಾಯಿತು.
ನಗರದ ಎರಡನೇ ಟಿ.ಎಂ.ಸಿ ಲೇಔಟ್, ಹೊಸ ಕೋರ್ಟ್ ಹಿಂಭಾಗದಲ್ಲಿರುವ ಬಿ.ಎಸ್.ಎಂ. ಶಾದಿಮಹಲ್ನಲ್ಲಿ ಟಿಪ್ಪು ಸುಲ್ತಾನ್ ಟ್ರಸ್ಟ್ ಮತ್ತು ಬಾಮ್ ಸೇಫ್ ಸಂಯುಕ್ತಾಶ್ರಯದಲ್ಲಿ ನಡೆದ ಪವಿತ್ರ ರಂಜಾನ್ ಮಾಸದ ಇಫ್ತಿಯಾರ್ ಭೋಜನ ಕೂಟದಲ್ಲಿ ಮೌಲಾನಾ ಉಮ್ಮರ್ ಫಾರೂಖ್ ಸಾಬ್ ರಷೀದ್, ವಿಜಯಪುರದ ಬಸವ ಮಠದ ಮಹದೇವ ಸ್ವಾಮಿಗಳು ಮತ್ತು ಏಸು ನವಜೀವನ ನಿಲಯದ ಫಾದರ್ ಎಚ್.ಎಸ್.ಪ್ರಕಾಶ್ ಭಾಗವಹಿಸಿ ಆಶೀರ್ವಚನವನ್ನು ನೀಡಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಡಾ.ಧನಂಜಯರೆಡ್ಡಿ, ನಗರ ಸಭೆ ಸದಸ್ಯ ಅಫ್ಸರ್ಪಾಷ, ರೈತ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮೀನಾರಾಯಣರೆಡ್ಡಿ, ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್, ಮುನಿಕೆಂಪಣ್ಣ, ಪ್ರತೀಶ್, ಯಾಕುಬ್ ಶರೀಫ್, ನಯೀಮ್ಪಾಷ, ಮಹಬೂಬ್ಪಾಷ, ಎಂ.ಡಿ.ಸಾದಿಕ್, ಬಾಬಾ, ಹುಸೇನ್ಪಾಷ, ಅಲ್ಲಾಬಕಾಶ್, ಸಾದಿಕ್ಪಾಷ, ಫಾರುಕ್, ಮೌಲಾ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.