ತಾಲ್ಲೂಕಿನ ಹಿತ್ತಲಹಳ್ಳಿಯ ಎಚ್.ಜಿ.ಗೋವಿಂದೇಗೌಡ ಅವರು ಕೊಯಿಮತ್ತೂರಿನ ಭಾರತಿಯಾರ್ ವಿಶ್ವವಿದ್ಯಾನಿಲಯದಿಂದ ಡಾಕ್ಟರ್ ಆಫ್ ಫಿಲಾಸಫಿ(ಪಿ.ಎಚ್.ಡಿ) ಪದವಿಯನ್ನು ಪಡೆದಿದ್ದಾರೆ.
ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಡೀನ್ ಡಾ.ವೈ.ರಾಜಾರಾಮ್ ಅವರ ಮಾರ್ಗದರ್ಶನದಲ್ಲಿ ಎಚ್.ಜಿ.ಗೋವಿಂದೇಗೌಡ ಅವರು “ದಿ ಸ್ಟಡಿ ಆಫ್ ಪಾವರ್ಟಿ ಅಲ್ಲೀವಿಯೇಷನ್ ಆಫ್ ಅರ್ಬನ್ ಪೂರ್ ಥ್ರೂ ಮೈಕ್ರೋ ಫೈನಾನ್ಸ್ ಇನ್ ಕರ್ನಾಟಕ” ವಿಷಯದ ಕುರಿತಾಗಿ ಅಧ್ಯಯನ ನಡೆಸಿ ಥೀಸಿಸ್ ಮಂಡಿಸಿದ್ದಾರೆ.