Home News ತಾಲ್ಲೂಕಿನಲ್ಲಿ ಸರಳವಾಗಿ ಗುರುಪೂರ್ಣಿಮೆ ಆಚರಣೆ

ತಾಲ್ಲೂಕಿನಲ್ಲಿ ಸರಳವಾಗಿ ಗುರುಪೂರ್ಣಿಮೆ ಆಚರಣೆ

0

ಗುರುಪೂರ್ಣಿಮೆ ಅಂಗವಾಗಿ ಭಾನುವಾರ ತಾಲ್ಲೂಕಿನ ವಿವಿಧ ದೇವಾಲಯಗಳಲ್ಲಿ ಸರಳವಾಗಿ ಪೂಜೆಯನ್ನು ನಡೆಸಲಾಯಿತು.

 ತಾಲ್ಲೂಕಿನ ಮಳ್ಳೂರಿನ ಸಮೀಪದ ಭಟ್ರೇನಹಳ್ಳಿಯ ಸಾಯಿನಾಥ ಜ್ಞಾನಮಂದಿರದಲ್ಲಿ ಸಾಯಿಬಾಬಾಗೆ ಮುಂಜಾನೆ ಕಾಕಡಾರತಿಯನ್ನು ಮಾಡಲಾಯಿತು. ಸುದರ್ಶನ ಹೋಮ ಮತ್ತು ಸತ್ಯನಾರಾಯಣ ಪೂಜೆಯನ್ನು ನಡೆಸಲಾಯಿತು.

 ದೇವಾಲಯವನ್ನು ಹಾಗೂ ದೇವರುಗಳಲ್ಲು ವಿವಿಧ ಹೂಗಳಿಂದ ಅಲಂಕರಿಸಲಾಗಿತ್ತು. ಕಡಿಮೆ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಆಗಮಿಸಿದ್ದರು. ಕೊರೊನಾ ಕಾರಣದಿಂದಾಗಿ ಪ್ರಸಾದ ವಿನಿಯೋಗವಿರಲಿಲ್ಲ.

error: Content is protected !!