ತಾಲ್ಲೂಕಿನ ಹಂಡಿಗನಾಳ ಗ್ರಾಮದಲ್ಲಿ ಶನಿವಾರ ಒಕ್ಕಲಿಗರ ಯುವ ಸೇನೆ ಸಂಘದ ವತಿಯಿಂದ ಸಂಘದ ಸ್ವಂತ ನಿವೇಶನದಲ್ಲಿ ನಾಮ ಫಲಕ ಅಳವಡಿಸಿ, ನಾಡಪ್ರಭು ಕೆಂಪೇಗೌಡ ಅವರ ಜಯಂತಿಯನ್ನು ಸರಳವಾಗಿ ಆಚರಿಸಿದ ಸಂದರ್ಭದಲ್ಲಿ ಹಂಡಿಗನಾಳ ಒಕ್ಕಲಿಗರ ಯುವಸೇನೆ ಸಂಘದ ಗೌರವಾಧ್ಯಕ್ಷ ಗೋವಿಂದರಾಜು ಮಾತನಾಡಿದರು.
ನಿವೇಶನ ಚಿಕ್ಕದಾದರೂ ಚೊಕ್ಕವಾದ ಜನೋಪಯೋಗಿಯಾದ ಕೆಂಪೇಗೌಡ ಭವನವನ್ನು ನಿರ್ಮಾಣ ಮಾಡಲಾಗುವುದು ಎಂದು ಅವರು ತಿಳಿಸಿದರು.
ಕೆಂಪೇಗೌಡರು ಜಾತ್ಯಾತೀತ ಮನೋಭಾವದಿಂದ ದೂರದೃಷ್ಟಿಯಿಂದ ನಾಡನ್ನು ಕಟ್ಟುವಲ್ಲಿ ಶ್ರಮಿಸಿದವರು. ಅವರ ಆದರ್ಶದಂತೆ ನಾವುಗಳು ಸಮಾಜದ ಅಭ್ಯುದಯಕ್ಕಾಗಿ ಶ್ರಮಿಸೋಣ ಎಂದರು.
ಈ ಸಂದರ್ಭದಲ್ಲಿ ಹಂಡಿಗನಾಳ ಒಕ್ಕಲಿಗರ ಯುವಸೇನೆ ಸಂಘದ ಅಧ್ಯಕ್ಷ ವೆಂಕಟಪ್ಪ, ಆರ್.ಚಂದ್ರು, ನಾರಾಯಣಸ್ವಾಮಿ, ಬಿ.ಎಂ.ಜಯರಾಮ್, ಅರುಣ್ ಕುಮಾರ್, ಅನಿಲ್, ಸತೀಶ್, ವಿ.ಚನ್ನಕೃಷ್ಣಪ್ಪ, ಶ್ರೀನಿವಾಸಪ್ಪ ಹಾಜರಿದ್ದರು.