ನಗರದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಶುಕ್ರವಾರ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾರ್ವಜನಿಕ ಆಸ್ಪತ್ರೆಯ ವೈದ್ಯ ಡಾ.ಗುರು ಮಾತನಾಡಿದರು.
ಯುವಕರು ಇಂದು ಸಣ್ಣಪುಟ್ಟ ಸೋಲುಗಳಿಗೂ ಆತ್ಮಹತ್ಯೆ ಹಾದಿ ಹಿಡಿಯುತ್ತಿದ್ದಾರೆ. ಮನುಷ್ಯರಾಗಿ ಹುಟ್ಟಿರುವುದೇ ಸಾಧನೆ ಮಾಡಲು. ಹೀಗಾಗಿ ಯುವ ಸಮೂಹ ಆತ್ಮಹತ್ಯೆ ಹಾದಿ ಬಿಟ್ಟು ಸಾಧನೆ ಕಡೆಗೆ ಗಮನ ಕೊಡಬೇಕು ಎಂದು ಅವರು ತಿಳಿಸಿದರು.
ಅತಿಯಾದ ಒತ್ತಡದಿಂದ ಇಂದು ಆತ್ಮಹತ್ಯೆ ಹೆಚ್ಚಾಗುತ್ತಿವೆ. ಹೀಗಾಗಿ ಒತ್ತಡ ನಿಭಾಯಿಸುವ ಕಲೆಯನ್ನು ಪಠ್ಯದಲ್ಲಿ ಸೇರಿಸುವುದು ಅವಶ್ಯಕವಾಗಿದೆ. ಜನ ಆತ್ಮಹತ್ಯೆ ಯೋಜನೆಯನ್ನು ಮನಸ್ಸಿನಿಂದ ತೆಗೆದು ಹಾಕುವಂತೆ ಜಾಗೃತಿ ಮೂಡಿಸುವ ಭಿತ್ತಿ ಪತ್ರಗಳನ್ನು ಆರೋಗ್ಯ ಇಲಾಖೆಯ ವತಿಯಿಂದ ಎಲ್ಲೆಡೆ ಹಂಚಲಾಗುತ್ತಿದೆ ಎಂದು ಹೇಳಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ ಮೂರ್ತಿ, ಆರೋಗ್ಯ ಸಿಬ್ಬಂದಿ ಮುನಿಲಕ್ಷ್ಮಮ್ಮ, ಲೋಕೇಶ್, ಗೀತಾ, ನಂದಿನಿ, ಸಂದೀಪ್, ಕೀರ್ತಿ, ವಿಜಯಮ್ಮ ಹಾಜರಿದ್ದರು.